Advertisement

ಶ್ರಮಿಕ್‌ ರೈಲಿನಿಂದ ಕಾರ್ಮಿಕರು ಗೋರಖ್‌ಪುರಕ್ಕೆ

01:53 AM May 31, 2020 | Sriram |

ಉಡುಪಿ: ಜಿಲ್ಲಾಡಳಿತದ ವತಿಯಿಂದ ಶನಿವಾರ ಇಂದ್ರಾಳಿ ರೈಲು ನಿಲ್ದಾಣದಿಂದ 910 ಮಂದಿ ಕಾರ್ಮಿಕರು ಶ್ರಮಿಕ್‌ ರೈಲು ಮೂಲಕ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ.

Advertisement

ಉಡುಪಿ ಮತ್ತು ಮಂಗಳೂರಿನಿಂದ 600, ಶಿವಮೊಗ್ಗದಿಂದ 300ಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಮ್ಮೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ರೈಲಿಗೆ 1,200 ಜನರು ನೋಂದಣಿ ಮಾಡಿಕೊಂಡಿದ್ದರು. ಆದರೆ ಲಾಕ್‌ಡೌನ್‌ ತೆರವಾದ ಕಾರಣ ಕೆಲಸ ಸಿಕ್ಕಿದ್ದರಿಂದ 300 ಜನರು ಇಲ್ಲಿ ಉಳಿದುಕೊಂಡಿದ್ದಾರೆ.

“ರೈಲ್ವೇ ಕಂಡಕ್ಟರ್‌’ ಅಧಿಕಾರಿಗಳು!
ನಗರಸಭೆಯ ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್‌, ಎಇಇ ಮೋಹನ್‌ ರಾಜ್‌, ಕಂದಾಯ ಅಧಿಕಾರಿ ಧನಂಜಯ, ಪರಿಸರ ಎಂಜಿನಿಯರ್‌ ಸ್ನೇಹಾ, ಎಂಜಿನಿ ಯರ್‌ ದುರ್ಗಾ ಪ್ರಸಾದ್‌, ತಹಶೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌ ಸ್ಥಳದಲ್ಲಿ ಇದ್ದು ವಲಸೆ ಕುಟುಂಬಗಳ ಮಾಹಿತಿ ಪಡೆದು ಸೇವಾ ಸಿಂಧುವಿನಲ್ಲಿ ನೋಂದಾಯಿಸಿ ಕೊಂಡವರಿಗೆ ಟಿಕೆಟ್‌ ವಿತರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next