Advertisement

ಸಾವರ್ಕರ್‌ ನಿಂದನೆ: ರಾಹುಲ್‌ ಕ್ಷಮೆಗೆ ಸಚಿವ Nitin Gadkari ಆಗ್ರಹ

01:19 AM Apr 06, 2023 | Team Udayavani |

ಮುಂಬಯಿ: ಹಿಂದೂ ನಾಯಕ ವಿನಾಯಕ ದಾಮೋದರ್‌ ಸಾವರ್ಕರ್‌ ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ, ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ನಾಲಿಗೆ ಹರಿಬಿಟ್ಟಿದ್ದಾರೆ. ಇನ್ನಾದರೂ ಅವರು ತಮ್ಮ ತಪ್ಪನ್ನು ಅರಿತು ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ನಾಗ್ಪುರದ ಶಂಕರನಗರದಲ್ಲಿ ನಡೆದ ಸಾವರ್ಕರ್‌ ಗೌರವ ಯಾತ್ರೆಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಗಡ್ಕರಿ ಮಾತನಾಡಿದರು.

ಈ ವೇಳೆ ರಾಹುಲ್‌ ಅವರನ್ನು ಟೀಕಿಸಿದ ಗಡ್ಕರಿ ಸಾವರ್ಕರ್‌ ಬಗ್ಗೆ ದೇಶದ ಯುವಜನತೆಗೆ ಮತ್ತಷ್ಟು ತಿಳಿಯುವಂತಾಗಿದ್ದು ನಿಮ್ಮಿಂದಲೇ, ಅದಕ್ಕಾಗಿ ಧನ್ಯವಾದ. ಇನ್ನಾದರೂ ಅವರ ಬಗ್ಗೆ ತಿಳಿದು ಕ್ಷಮೆಯಾಚಿಸಿ. ಸಾವರ್ಕರ್‌ ಅವರನ್ನು ನಿಂದಿಸುವ ಹಕ್ಕು ನಿಮಗೆ ಯಾರು ಕೊಟ್ಟರು. ಈ ನಿಂದನೆಯನ್ನು ಯಾರೂ ಸಹಿಸುವುದಿಲ್ಲ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next