Advertisement

Politics: ಭಗವಂತ ಖೂಬಾಗೆ ಟಿಕೆಟ್‌ ನೀಡದಂತೆ ಕೂಗು

12:37 AM Jan 11, 2024 | Team Udayavani |

ಬೆಂಗಳೂರು: ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಈ ಬಾರಿ ಟಿಕೆಟ್‌ ಕೊಡಬಾರದು ಎಂಬ ಕೂಗು ಬಿಜೆಪಿ ಚುನಾವಣಾ ಸಿದ್ಧತ ಸಭೆಯಲ್ಲಿ ಬಲವಾಗಿ ಮೊಳಗಿದ್ದು, ಹಿರಿಯ ನಾಯಕರ ಸಮ್ಮುಖದಲ್ಲೇ ಸ್ಥಳೀಯ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಮಾಜಿ ಸಚಿವ ಪ್ರಭು ಚೌಹಾಣ್‌, ಶಾಸಕ ಶರಣು ಸಲಗಾರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರದ ಮುಖಂಡರು ಸಭೆಯಲ್ಲಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಭೆಯ ಮಧ್ಯೆಯೇ ಖೂಬಾ ಎದ್ದು ಹೋದರು ಎಂದು ಮೂಲಗಳು ತಿಳಿಸಿವೆ. ಅದೇ ರೀತಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಕುಟುಂಬ ವರ್ಗಕ್ಕೆ ಟಿಕೆಟ್‌ ಕೊಡಬಾರದೆಂದು ಮುಖಂಡರಿಂದ ವಿರೋಧ ವ್ಯಕ್ತವಾಗಿದೆ.

ಖೂಬಾ ಹಾಗೂ ಪ್ರಭು ಚೌಹಾಣ್‌ ಮಧ್ಯೆ ಬೀದರ್‌ನಲ್ಲಿ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಲೋಕಸಭಾ ಚುನಾವಣ ಹೊಸ್ತಿಲಲ್ಲಿ ಅನಾವರಣಗೊಂಡಿದ್ದು, ಈ ಹಿಂದೆ ಖೂಬಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಚೌಹಾಣ್‌ ರಾಜ್ಯ ಬಿಜೆಪಿ ಶಿಸ್ತು ಸಮಿತಿಗೆ ದೂರು ನೀಡಿದ್ದರು. ಈ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಬಗ್ಗೆಯೂ ಈ ಸಭೆಯಲ್ಲಿ ಪ್ರಸ್ತಾವವಾಗಿದೆ. ಹಾಲಿ ಸಂಸದ ದೇವೇಂದ್ರಪ್ಪ ಬದಲು ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಟಿಕೆಟ್‌ ನೀಡಬೇಕೆಂದು ಕೆಲ ಮುಖಂಡರು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next