Advertisement

ಅಧಿಕಾರಿ ಕುಟುಂಬಕ್ಕೆ ಮೀಸಲು ಬೇಕೆ?

06:00 AM Aug 25, 2018 | |

ಹೊಸದಿಲ್ಲಿ: ಸರಕಾರದ ಉನ್ನತ ಹುದ್ದೆಯಲ್ಲಿರುವ ಎಸ್‌ಸಿ, ಎಸ್‌ಟಿ ಸಮುದಾಯದ ಉದ್ಯೋಗಸ್ಥರ ಕುಟುಂಬ ಸದಸ್ಯರಿಗೆ ಬಡ್ತಿಯಲ್ಲಿ ಮೀಸಲು ಏಕೆ? ಇತರ ಹಿಂದುಳಿದ ವರ್ಗ (ಒಬಿಸಿ)ದವರಲ್ಲಿ ಸರ್ಕಾರಿ ಉನ್ನತ ಹುದ್ದೆಗಳಲ್ಲಿರುವ ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಮೀಸಲು ವ್ಯಾಪ್ತಿಯಿಂದ ಹೊರಗೆ ಇಟ್ಟಂತೆ, ಎಸ್‌ಸಿ ಎಸ್‌ಟಿ ಸಮುದಾಯಕ್ಕೂ ಕೆನೆಪದರದ ನಿಯಮವನ್ನು ಅನ್ವಯಿಸುವಂತೆ ಮಾಡಬಾರದೇಕೆ?

Advertisement

ಇಂಥದ್ದೊಂದು ಪ್ರಶ್ನೆಯನ್ನು ಮುಂದಿಟ್ಟಿದ್ದು ಸುಪ್ರೀಂಕೋರ್ಟ್‌. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಬಡ್ತಿಯಲ್ಲಿ ಮೀಸಲು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಐವರು ಸದಸ್ಯರಿರುವ ಸಾಂವಿಧಾನಿಕ ಪೀಠ ಈ ಪ್ರಶ್ನೆ ಹಾಕಿತು. “ಆರಂಭಿಕ ಹಂತದಲ್ಲಿ ಮೀಸಲು ಇರುವುದೇನೋ ಸರಿ. ಒಬ್ಬ ವ್ಯಕ್ತಿ ಮೀಸಲು ವ್ಯವಸ್ಥೆಯಿಂದಲೇ ರಾಜ್ಯ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಏರುತ್ತಾನೆ ಎಂದಿಟ್ಟುಕೊಳ್ಳಿ. ಆತನ ಕುಟುಂಬ ಸದಸ್ಯರನ್ನೂ ಹಿಂದುಳಿದವರು ಎಂದು ಪರಿಗಣಿಸಿ ಬಡ್ತಿಯಲ್ಲಿ ಮೀಸಲು ನೀಡುವುದು ಸರಿಯೇ? ಐಎಎಸ್‌ ಅಧಿಕಾರಿಯ ಮರಿಮೊಮ್ಮಗನಿಗೂ ಮೀಸಲು ಅಗತ್ಯವಿದೆಯೇ .  ಒಂದು ಬಾರಿ ಮೊದಲನೇ ದರ್ಜೆ ಅಧಿಕಾರಿ ಹುದ್ದೆಗೆ ಹಿಂದುಳಿದ ವರ್ಗದ ವ್ಯಕ್ತಿ  ಬಂದಾಗ ಆತನಿಗೆ ನೀಡಲಾಗಿದ್ದ ಮೀಸಲು ವ್ಯವಸ್ಥೆ ಮುಕ್ತಾಯಗೊಳ್ಳುತ್ತದೆ’ ಎಂದಿದೆ ಸುಪ್ರೀಂಕೋರ್ಟ್‌.

Advertisement

Udayavani is now on Telegram. Click here to join our channel and stay updated with the latest news.

Next