Advertisement

ಶಾರ್ಟ್‌ ಸರ್ಕ್ನೂಟ್: ಗುಡಿಸಲು ಭಸ್ಮ

10:52 AM Jan 10, 2019 | |

ವಿಜಯಪುರ: ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್ನಿಂದಾಗಿ ರೈತರೊಬ್ಬರ ತೊಟದ ವಸ್ತಿ ಗುಡಿಸಲು ಸಂಪೂ ರ್ಣ ಭಸ್ಮವಾಗಿ ಲಕ್ಷಾಂತರ ರೂ. ನಷ್ಟವಾಗಿರುವ ಘಟನೆ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ಜರುಗಿದೆ.

Advertisement

ಕಳ್ಳಕವಟಗಿ ಗ್ರಾಮದ ತೋಟದ ವಸ್ತಿ ಪ್ರದೇಶದಲ್ಲಿ ತಮ್ಮ ದ್ರಾಕ್ಷಿ ತೋಟದಲ್ಲಿ ರೈತ ಅನಿಲ ಸೊರಡಿ ನಿರ್ಮಿಸಿಕೊಂಡು ವಾಸವಿದ್ದ. ಈ ಗುಡಿಸಲಿಗೆ ಬುಧವಾರ ಮಧ್ಯಾಹ್ನ 3:30ರ ಸುಮಾರಿಗೆ ಇದ್ದಕ್ಕಿದ್ದಂತೆ ಶಾರ್ಟ್‌ ಸರ್ಕ್ನೂಟ್ ಆಗಿ ಗುಡಿಸಲು ಭಸ್ಮವಾಗಿದ್ದು ಟಿವಿ, ದಿನಬಳಕೆ ವಸ್ತುಗಳು, ಬೆಲೆ ಬಾಳುವ ಇತರೆ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಸುದ್ದಿ ತಿಳಿದು ತಿಕೋಟಾ ಪೊಲೀಸರು ಸ್ಥಳಕ್ಕೆ ಅಗಮಿಸುವ ಹಂತದಲ್ಲಿ ಗುಡಿಸಲು ಸಂಪೂರ್ಣ ಭಸ್ಮವಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ತಿಕೋಟಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next