Advertisement

“ಕಿಡಿಗೇಡಿಗಳನ್ನು ಭಯೋತ್ಪಾದನ ಕಾಯ್ದೆಯಡಿ ಬಂಧಿಸಿ’ : ಶೋಭಾ ಕರಂದ್ಲಾಜೆ

11:36 PM Apr 17, 2022 | Team Udayavani |

ಹೊಸಪೇಟೆ : ಸಾಮಾಜಿಕ ಜಾಲತಾಣದಲ್ಲಿ ಹಳೆಯ ವೀಡಿಯೋ ಪೋಸ್ಟ್‌ ಮಾಡಿದ್ದನ್ನು ಮುಂದಿಟ್ಟುಕೊಂಡು ಪೊಲೀಸರನ್ನು ಟಾರ್ಗೆಟ್‌ ಮಾಡಿ ಕಿಡಿಗೇಡಿಗಳು ಹುಬ್ಬಳ್ಳಿಯಲ್ಲಿ ಪೊಲೀಸ್‌ ಠಾಣೆ, ಆಸ್ಪತ್ರೆ, ವಾಹನಗಳ ಮೇಲೆ ದಾಳಿ ನಡೆಸಿದ್ದು, ರಾಜ್ಯ ಸರಕಾರ ಅವರ ವಿರುದ್ಧ ಗೂಂಡಾ ಕಾಯ್ದೆ, ಭಯೋತ್ಪಾದನ ಕಾಯ್ದೆಯಡಿ ಬಂಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಶಕ್ತಿಗಳನ್ನು ಸಹಿಸಬಾರದು. ಪೊಲೀಸರನ್ನೇ ಹೆದರಿಸುವ ಘಟನೆ ನಡೆಯುತ್ತಿವೆ. ಹುಬ್ಬಳ್ಳಿ ಘಟನೆ ಚಿಕ್ಕದು. ಪೋಸ್ಟ್‌ ಹಾಕಿದವನನ್ನು ಬಂಧಿಸುವಂತೆ, ಶಿಕ್ಷೆ ಕೊಡುವಂತೆ ಒತ್ತಾಯಿಸಬಹುದಿತ್ತು. ರಾಜ್ಯ ಸರಕಾರ ಅದಕ್ಕೆ ಸಿದ್ಧವಿದೆ. ಆದರೆ ಸರಕಾರದ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ, ಚಾಲೆಂಜ್‌ ಮಾಡುವಂತಹ ಶಕ್ತಿಯನ್ನು ಸರಕಾರ ಸಹಿಸಬಾರದು ಎಂದರು.

ಬಿಗಿ ಕ್ರಮವಾಗಲಿ
ಘಟನೆಗೆ ಸಂಬಂಧಿಸಿದಂತೆ ಬಿಗಿ ಕ್ರಮ ಆಗಬೇಕು. ತಪ್ಪಿತಸ್ಥರನ್ನು ಬಂಧಿಸಬೇಕು. ಕಠಿನವಾದ ಶಿಕ್ಷೆ ಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next