Advertisement

ಕಾಂಗ್ರೆಸ್‌ನಿಂದ ಗ್ಯಾರಂಟಿ ಕೊಟ್ಟು ತಲೆ ಕೆಡಿಸುವ ಕೆಲಸ: ಡಿವಿಎಸ್‌

11:28 PM Apr 01, 2024 | Team Udayavani |

ಬೆಂಗಳೂರು: ಗ್ಯಾರಂಟಿ ಕೊಟ್ಟು ಜನರ ತಲೆ ಕೆಡಿಸುವ ಕೆಲಸವನ್ನು ಕಾಂಗ್ರೆಸ್‌ ಸರಕಾರ ಮಾಡುತ್ತಿದೆ. ಆದರೆ ಯಾವ ಗ್ಯಾರಂಟಿಯೂ ಸ್ವಾಭಿಮಾನದ ಬದುಕು ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ದೂರಿದರು.

Advertisement

ಸೋಮವಾರ ಬೆಂಗಳೂರಿನಲ್ಲಿ ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್‌ ಪರ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು, 10 ವರ್ಷದ ಮನಮೋಹನ್‌ ಸಿಂಗ್‌ ಆಡಳಿತ ಹಾಗೂ ಮೋದಿ ಆಡಳಿತಕ್ಕೆ ಅಜಗಜಾಂತರವಿದೆ. ಅಭಿವೃದ್ಧಿಗೆ ನಿಜವಾದ ಅರ್ಥ ಕೊಟ್ಟು, ಸಾಮಾನ್ಯ ಪ್ರಜೆ ಕೂಡ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಸೂತ್ರ ಕಟ್ಟಿಕೊಟ್ಟಿದೆ. ಜಗತ್ತಿನ ಪ್ರಬಲ ಆರ್ಥಿಕತೆಯ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ. ದೇಶದ ಕೋಟ್ಯಂತರ ಜನರನ್ನೇ ತನ್ನ ಪರಿವಾರ ಎನ್ನುವ ಮೋದಿ ಅವರನ್ನು ಬೆಂಬಲಿಸಬೇಕು. ಸಮಾನ ನಾಗರಿಕ ಸಂಹಿತೆ ಆಗಬೇಕಿದೆ. ಮುಂದಿನ 5 ವರ್ಷದಲ್ಲಿ ಅದೂ ಜಾರಿ ಆಗಲಿದೆ. ಅದಕ್ಕಾಗಿ ಅವಕಾಶ ಕೊಡಿ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next