Advertisement

Lok Sabha Election; ನನ್ನ ಮುಖ ನೋಡಿ ಯಾರೂ ಓಟು ಹಾಕಲ್ಲ: ಪ್ರೀತಂ ಗೌಡ

11:56 PM Apr 07, 2024 | Team Udayavani |

ಮೈಸೂರು: ಹಾಸನ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಜತೆ ನನ್ನ ಭೇಟಿ ವಿಚಾರ ನನಗೇ ಗೊತ್ತಿಲ್ಲ, ಅದರ ಬಗ್ಗೆ ನನಗೆ ಮಾಹಿತಿಯೂ ಇಲ್ಲ ಎಂದು ಹೇಳಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಒಟ್ಟಿನಲ್ಲಿ ಎನ್‌ಡಿಎ ಅಭ್ಯರ್ಥಿ ಹಾಸನದಲ್ಲಿ ಗೆಲ್ಲಬೇಕು ಅಷ್ಟೆ. ಪ್ರೀತಂ ಗೌಡ ಮುಖ ನೋಡಿ ಯಾರೂ ಓಟು ಹಾಕುವುದಿಲ್ಲ. ನಮ್ಮ ಮನೆಯಲ್ಲೂ ಮೋದಿ ಮುಖ ನೋಡೇ ಮತ ಹಾಕುತ್ತಾರೆ ಎಂದು ಸೂಚ್ಯವಾಗಿ ನುಡಿದರು.

Advertisement

ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಅಪ್ಪಿತಪ್ಪಿಯೂ ಹಾಸನ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಮತ್ತು ಜೆಡಿಎಸ್‌ ಪಕ್ಷದ ಹೆಸರು ಹೇಳದ ಪ್ರೀತಮ್‌ ಗೌಡ, ತಮ್ಮ ಮಾತಿನುದ್ದಕ್ಕೂ ಎನ್‌ಡಿಎ ಅಭ್ಯರ್ಥಿ ಎನ್ನುತ್ತಲೇ ಇದ್ದರು. ಹಾಸನದಲ್ಲಿ ಪ್ರಚಾರಕ್ಕೆ ಹೋಗುವ ವಿಚಾರದಲ್ಲೂ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರಲ್ಲದೇ ಕಾಶ್ಮೀರಕ್ಕೆ ಹೋಗು ಅಂದ್ರೆ ಹೋಗುತ್ತೇನೆ ಎಂದು ಮಾತನ್ನು ಬೇರೆಕಡೆಗೆ ಸೆಳೆದರು.

ಮನವೊಲಿಕೆಗೂ ಬಗ್ಗದ ಪ್ರೀತಂ,
ಪ್ರಚಾರಕ್ಕೆ ಬರುವುದು ಅನುಮಾನ
ಹಾಸನ: ಲೋಕಸಭಾ ಚುನಾವಣೆಗೆ ಕೇವಲ 18 ದಿನಗಳಷ್ಟೇ ಬಾಕಿ ಇವೆ. ಕ್ಷೇತ್ರದಲ್ಲಿ ಜೆಡಿಎಸ್‌-ಬಿಜೆಪಿ ಮೈತ್ರಿಗೆ ಬಹುಪಾಲು ಬಿಜೆಪಿ ಮುಖಂಡರು ಸಮ್ಮತಿಸಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಮಾಜಿ ಶಾಸಕ ಪ್ರೀತಂ ಗೌಡ ಮತ್ತು ಬೆಂಬಲಿಗರು ಪ್ರಚಾರಕ್ಕಿಳಿದಿಲ್ಲ.

ಪ್ರೀತಂ ಗೌಡ ಮನವೊಲಿಕೆಗೆ ಪ್ರಯತ್ನ ಮುಂದುವರಿಸಿದರೂ ಪ್ರಯೋಜನವಾಗಿಲ್ಲ. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಪ್ರೀತಂ ಗೌಡರಿಗೆ ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಜವಾಬ್ದಾರಿ ವಹಿಸಲಾಗಿದೆ. ಹಾಗಾಗಿ ಅವರು ಆ ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಿಗಿಕೊಳ್ಳುವಂತೆ ಪ್ರೀತಂ ಗೌಡ ತಮ್ಮ ಬೆಂಬಲಿಗರಿಗೂ ಸೂಚನೆ ನೀಡಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಪ್ರೀತಂ ಪರ ಹೋರಾಟ ನಡೆಸಿದ್ದ ಅವರ ಆಪ್ತ ಬೆಂಬಲಿಗರು ಅಲ್ಲಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ಬೆಳವಣಿಗೆಯನ್ನು ಗಮನಿಸಿದರೆ ಪ್ರೀತಂ ಗೌಡ ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next