Advertisement

Union Minister ಶಿವರಾಜ್ ಸಿಂಗ್ ಚೌಹಾಣ್ ಕಾರು ರಸ್ತೆ ಗುಂಡಿಯಲ್ಲಿ ಸಿಲುಕಿ ಪರದಾಟ!

05:02 PM Sep 23, 2024 | Team Udayavani |

ರಾಂಚಿ :ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಯಾಣಿಸುತ್ತಿದ್ದ ಕಾರು ಮಳೆಯ ನಡುವೆ ರಸ್ತೆಯಲ್ಲಿದ್ದ ಹೊಂಡದಲ್ಲಿ ಸಿಲುಕಿಕೊಂಡ ವಿಡಿಯೋ ವೈರಲ್ ಆಗಿದೆ.

Advertisement

ಮಾಜಿ ಸಿಎಂ, ಹಿರಿಯ ಬಿಜೆಪಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರು ಸೋಮವಾರ(ಸೆ23) ಜಾರ್ಖಂಡ್‌ನ ಬಹರಗೋರಾದಲ್ಲಿ ರ್‍ಯಾಲಿಯಲ್ಲಿ ಭಾಗಿಯಾಗಲು ಪ್ರಯಾಣಿಸುತ್ತಿದ್ದಾಗ ಗುಂಡಿಗಳ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಎದುರಾಯಿತು.ಭಾರೀ ಮಳೆ ಸುರಿಯುತ್ತಿದ್ದು ರಸ್ತೆ ನದಿಯಂತಾಗಿದ್ದುದೇ ಈ ರೀತಿಯಾಗಲು ಕಾರಣ ಎನ್ನಲಾಗಿದೆ.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಕಾರು ನಡುರಸ್ತೆಯಲ್ಲಿ ಮಣ್ಣಿನಲ್ಲಿ ಸಿಲುಕಿಕೊಂಡಿದ್ದು. ಪರಿಸ್ಥಿತಿಯನ್ನು ಸರಿಪಡಿಸಲು ಭದ್ರತಾ ಸಿಬಂದಿ ಪ್ರಯತ್ನಿಸುತ್ತಿದ್ದರು. ಅನಿಶ್ಚಿತವಾಗಿ ಕಾರು ಓರೆಯಾಗಿರುವುದು ಕಂಡು ಬಂದಿದೆ. ಕಾರಿನಿಂದಿಳಿದ ಸಚಿವರು ಮತ್ತೊಂದು ವಾಹನದಲ್ಲಿ ಪ್ರಯಾಣ ಮುಂದುವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next