Advertisement

ಮತ್ತೆ ಬೂಟು ವಿವಾದದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌

03:45 AM Jan 07, 2017 | |

ಉಜ್ಜಯಿನಿ: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಈಗ ಮತ್ತೂಂದು ವಿವಾದಕ್ಕೆ ಗುರಿಯಾಗಿದ್ದಾರೆ. ಅವರ ಬೂಟುಗಳನ್ನು ಭದ್ರತಾ ಅಧಿಕಾರಿಯೊಬ್ಬರು ತೆಗೆದು ಕೊಂಡು ಹೋಗುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತಪೋವನದಲ್ಲಿನ ಬಿಜೆಪಿ ಶಿಬಿರಕ್ಕೆ ಹೋಗುವ ಮುನ್ನ ಅವರು ಜೈನ ಆಶ್ರಮಕ್ಕೆ ಹೋಗಲು ಶೂ ಕಳಚಿ ಮತ್ತೆ ಹಾಗೆಯೇ ಪಕ್ಕದಲ್ಲೇ ಇರುವ ಬಿಜೆಪಿ ಶಿಬಿರಕ್ಕೆ ಬರೀ ಕಾಲುಚೀಲದಲ್ಲೇ ಬಂದರು. ಇದನ್ನು ಗಮನಿಸಿದ ಪೊಲೀಸ್‌ ಅಧಿಕಾರಿ ಶೂ ಹಿಡಿದು ಓಡಿ ಬರುತ್ತಿರುವುದನ್ನು  ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದು ಭಾರೀ ಸುದ್ದಿಯಾಗಿದೆ. ಕಳೆದ ವರ್ಷ ಪ್ರವಾಹ ಪರಿಶೀಲನೆಗೆ ಹೋಗಿದ್ದಾಗಲೂ ಇದೆ ರೀತಿಯ ಎಡವಟ್ಟು ಭಾರೀ ಸದ್ದು ಮಾಡಿ ಕಿರಿಕಿರಿ ಉಂಟುಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next