Advertisement

ಕಲ್ಪತರು ನಾಡಿನಾದ್ಯಂತ ಶಿವನಾಮಸ್ಮರಣೆ

09:13 PM Mar 12, 2021 | Team Udayavani |

ತುಮಕೂರು: ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲಾ. ಈ ಶಿವನಾಮ ಸ್ಮರಣೆ ಯೊಂದಿಗೆ ವರುಷಕೆ ಒಂದು ಶಿವರಾತ್ರಿ, ಹರನನ್ನು ಪೂಜಿಸುವ ಶುಭರಾತ್ರಿ, ಇರುಳಲ್ಲಿ ಭಜಿಸುವ ಆ ರಾತ್ರಿ, ಎನ್ನುವ ಶಿವನ ಭಜನೆಯೊಂದಿಗೆ ಜಿಲ್ಲಾದ್ಯಂತ ಗುರುವಾರ ಸಡಗರ ಸಂಭ್ರಮದಿಂದ ಭಕ್ತರು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಿದರು.

Advertisement

ಮಹಾ ಶಿವರಾತ್ರಿಯಂದು ಇಡೀ ದಿನ ಶಿವದೇವಾಲಯಗಳಲ್ಲಿ ಶಿವಲಿಂಗಗಳಿಗೆ ವಿಶೇಷ ಪೂಜೆ ನೆರವೇರಿಸುವುದು, ಮನೆ ಮನೆಗಳಲ್ಲಿ ಶಿವ ಜಪ ಪಟಿಸುವುದಾಗಿದೆ. ಶಿವರಾತ್ರಿ ವಿಶೇಷವೆಂದರೆ ಉಪವಾಸ, ಜಾಗರಣೆಯ ಜೊತೆಗೆ ಶಿವ ದೇವಾಲಯಗಳಿಗೆ ಹೋಗಿಪೂಜೆ, ಉತ್ಸವಗಳು, ಅಭಿಷೇಕದಲ್ಲಿ ಭಾಗವಹಿಸುವುದಾಗಿದೆ.

ಸಾಮೂಹಿಕ ಅಭಿಷೇಕ: ಮಹಾಶಿವರಾತ್ರಿಯ ಅಂಗವಾಗಿ ಗುರುವಾರ ನಗರಾದ್ಯಂತ ಎಲ್ಲೆಡೆ ಸಡಗರ ಸಂಭ್ರಮ ಎಲ್ಲಾ ದೇವಾಲಯಗಳಲ್ಲೂ ಮಹಾಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನುಏರ್ಪ ಡಿಸಿದ್ದರಿಂದ ಸಾವಿರಾರು ಭಕ್ತರು ದೇವಾಲಯಗಳಿಗೆ ತೆರಳಿ ಸಾಮೂಹಿಕ ಅಭಿಷೇಕಅರ್ಚನೆಗಳಲ್ಲಿ ಭಾಗವಹಿಸುತ್ತಿದ್ದರು.
ಇಷ್ಟಾರ್ಥಗಳ ಸಿದ್ಧಿಗಾಗಿ ಪ್ರಾರ್ಥನೆ: ನಗರದ ಬಿ.ಎಚ್‌ ರಸ್ತೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಸಾಮೂಹಿಕ ಅಭಿಷೇಕ ಕಾರ್ಯ ಕ್ರಮಗಳುನಿರಂತರವಾಗಿ ನಡೆದವು. ಸಾವಿರಾರು ಭಕ್ತರು ಈದೇವಾಲಯಕ್ಕೆ ಭೇಟಿ ನೀಡಿ ಶಿವಲಿಂಗಗಳ ಮೇಲೆ ಜಲಾಭಿಷೇಕ, ಹಾಲಿನ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಅರ್ಚನೆಗಳನ್ನು ಮಾಡುವ ಮೂಲಕ ದೇವರಲ್ಲಿ ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಪ್ರಾರ್ಥಿಸಿದರು.
ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ: ಬನಶಂಕರಿ ನಗರದ ಈಶ್ವರ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಸಾಮೂಹಿಕ ಪೂಜೆ ಸಲ್ಲಿಸಿದರು. ಟಿಜಿಎಂಸಿ ಬ್ಯಾಂಕ್‌ ಆವರಣದ ಶ್ರೀ ಮಹಾಲಕ್ಷ್ಮೀ ದೇವಾಲ ಯದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಭಕ್ತರಿಗೆತಂಬಿಟ್ಟು ಪ್ರಸಾದವನ್ನು ವಿತರಣೆ ಮಾಡಲಾಯಿತು. ವಾಸವಿ ದೇವಾಲಯದಲ್ಲಿ, ಹೊರಪೇಟೆ ನೀಲಕಂಠ ಸ್ವಾಮಿ ದೇವಾಲಯದಲ್ಲಿ, ಶ್ರೀ ಮಹಾಗಣಪತಿ ಶ್ರೀ ನವಗ್ರಹ ದೇವಾಲಯದಲ್ಲಿ ಮಹಾಶಿವರಾತ್ರಿ ಪೂಜೆಗಳು ನಡೆದವು.

40 ಅಡಿ ಶಿವಜ್ಯೋತಿರ್ಲಿಂಗ: ನಗರದ ಡಾ.ರಾಧಾ ಕೃಷ್ಣ ರಸ್ತೆಯ ಬಸವೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ರಿಂಗ್‌ ರಸ್ತೆಯಲ್ಲಿ ಪ್ರಜಾ ಪಿತ ಬ್ರಹ್ಮಕುಮಾರಿ ಈಶ್ವರೀಯ ಮಹಾ ವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಅಂಗ ವಾಗಿ 40 ಅಡಿ ಶಿವಜ್ಯೋತಿರ್ಲಿಂಗದೊಳಗೆ ಝಗ ಮಗಿಸುವ ಭಾರತ ಅದರ ಒಳಗಡೆ ಜ್ಯೋತಿರ್ಲಿಂಗ ದರ್ಶನ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ 21 ಶಿವಲಿಂಗಗಳ ಮೆರವಣಿಗೆ ಸಂಚರಿಸಿತು. ನಗರದ ಹೊರಪೇಟೆಯಲ್ಲಿರುವ ನೀಲಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ಏರ್ಪಡಿಸಲಾಗಿದ್ದ ಕೈಲಾಸ ಮಂಟಪದಲ್ಲಿನ ಶಿವ ಪಾರ್ವತಿಯರನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಸೇರಿದಂತೆ ಭಕ್ತರು ಆಗಮಿಸಿ ದರ್ಶನ ಪಡೆದರು.
ನಗರದ ಕುಣಿಗಲ್‌ ರಸ್ತೆಯ ಬನಶಂಕರಿಯಲ್ಲಿನ ಮಳೆ ಬಸವಣ್ಣ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪಂಚಲಿಂಗ ದರ್ಶನ, ಬಸವನ ಮೇಲೆ ಕುಳಿತ ಶಿವ ಹಾಗೂ ದೇವಾಲಯದ ಆವರಣ ದಲ್ಲಿ ರುವ ಬೃಹತ್‌ ಶಿವನ ಪ್ರತಿಮೆಗೆ ವಿಶೇಷ ಅಲಂಕಾರ ಹಾ ಗೂ ಪೂಜೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ದೇವಾಲಯಕ್ಕೆ ತೆರಳಿ ಶಿವನ ದರ್ಶನ ಪಡೆದರು.

ವೈದ್ಯನಾಥೇಶ್ವರ ಸ್ವಾಮಿ ರಥೋತ್ಸವ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ಹರೆಯೂರು ವೈದ್ಯನಾಥೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ರಥೋತ್ಸವ ವೈಭವಯುತವಾಗಿ ನಡೆ ಯಿತು. ಸಾವಿರಾರು ಭಕ್ತರು ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ತಾಲೂಕಿನ ಹಾಲನೂರಿನಲ್ಲಿರುವ ಶ್ರೀ ಮಲ್ಲಿಕಾ ರ್ಜುನ ಸ್ವಾಮಿಯ ಉತ್ಸವವು ವೈಭವಯುತವಾಗಿ ನಡೆಯಿತು. ಶ್ರೀ ನಂಜುಂಡ ಶಿವಯೋಗಿಗಗಳ ಗದ್ದುಗೆಯ ಬಳಿ ಆಗಮಿಸಿ ಅಲ್ಲಿ ಶ್ರೀ ಸ್ವಾಮಿಯ ಗದ್ದು ಗೆ ಮೇಲೆ ಸ್ಥಾಪಿಸಿ ಶಿವಲಿಂಗಕ್ಕೆ ಹಾಗೂ ಶ್ರೀ ಗಣ ಪತಿ ಮತ್ತು ನವಗ್ರಹಗಳಿಗೆ ರುದ್ರಾಭಿಷೇಕ, ಸಹಸ್ರ ನಾಮ ಪೂಜೆ, ಮಹಾಮಂಗಳಾರತಿ ಜರುಗಿತು. ನಗರದ ಜಯಪುರ ಬಡಾವಣೆಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಶ್ರೀಲಕ್ಷ್ಮೀ ದೇವಿ ದೇವಾಲ ಯದಲ್ಲಿ ಶ್ರೀಗಂಗಾಧರೇಶ್ವರ ಸ್ವಾಮಿಯ ಉತ್ಸವವು ಮೆರವಣಿಗೆಯ ಮೂಲಕ ನಡೆಯಿತು. ಉಪ್ಪಾರಹಳ್ಳಿಯ ಶಿವಲಿಂಗ ರಸ್ತೆಯಲ್ಲಿರುವ ಶ್ರೀಮಹಾ ಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಕುಂಭಾಭಿಷೇಕ ಮತ್ತು ಕ್ಷೀರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾದ್ಯಂತ ಎಲ್ಲಾ ಶಿವ ದೇವಾಲಯಗಳಲ್ಲೂ ವಿಶೇಷ ಪೂಜೆ ಪ್ರಾರ್ಥನೆಗಳು ನಡೆದವು. ಸಿದ್ಧಗಂಗಾ ಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕ್ಷೇತ್ರನಾಥ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ ಉತ್ಸವಗಳು ಜರುಗಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next