Advertisement

ಮಹದೇವನ ಧ್ಯಾನದಲ್ಲಿ ಮಹಾನಗರ ತಲ್ಲೀನ

06:09 PM Mar 12, 2021 | Team Udayavani |

ಬೆಂಗಳೂರು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಶಿವಾಲಯಗಳಲ್ಲಿ ಗುರುವಾರ ಶಿವನಾಮ ಸ್ಮರಣೆ ಮೊಳಗಿತು. ಮುಂಜಾನೆ ಯಿಂದಲೇ ಶಿವನಿಗೆ ವಿವಿಧ ಪೂಜಾ ಕೈಂಕರ್ಯ ನಡೆದಿದ್ದು, ನೆರದ ಭಕ್ತರನ್ನು ಆಕರ್ಷಿಸಿದವು. ಭಕ್ತರು ಸಾಲಿನಲ್ಲಿ ನಿಂತು ದರ್ಶನ ಪಡೆದರು.

Advertisement

ಶಿವರಾತ್ರಿ ಅಂಗವಾಗಿ ಶಿವಾಲಯಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬಣ್ಣ ಬಣ್ಣದ ವಿದ್ಯುತ್‌ ದೀಪಲಂಕಾರ ಮಾಡಲಾಗಿತ್ತು. ಕೆಂಪೇಗೌಡ ನಗರದ ಐತಿಹಾಸಿಕ ಪ್ರಸಿದ್ಧ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಹಲಸೂರಿನ ಶ್ರೀಸೋಮೇಶ್ವರ ದೇವಾಲಯ,  ಮಲ್ಲೇಶ್ವರದ ಶ್ರೀಕಾಡುಮಲ್ಲೇಶ್ವರ ದೇವಾಲಯ, ಕೋಟೆ ಶ್ರೀ ಜಲಕಂಠೇಶ್ವರ ದೇವಸ್ಥಾನ, ಜೆಪಿನಗರ 7ನೇ ಹಂತದಲ್ಲಿರುವ ಶ್ರೀ ನಂಜುಂಡೇಶ್ವರ ದೇವಾ ಲಯ ಸೇರಿದಂತೆ ಹಲವು ಶಿವಾ ಲಯ ಗಳಲ್ಲಿ ಈಶ್ವರನಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿ ಷೇಕಗಳ ನಡೆದವು.

ಭಕ್ತರ ಸುಗಮ ದರ್ಶನಕ್ಕಾಗಿ ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ  ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಆಡಳಿತ ಮಂಡಳಿ ಭಕ್ತರ ದರ್ಶನಕ್ಕಷ್ಟೇ ಅವಕಾಶ ನೀಡಿತ್ತು. ಆ ಹಿನ್ನೆಲ್ಲೆಯಲ್ಲಿ ಮುಂಜಾನೆಯೇ ಸಾಲುಗಟ್ಟಿದ್ದ ಭಕ್ತ ಸಮೂಹ ದೂರದಿಂದಲೇ ದೇವರ ದರ್ಶನ ಪಡೆಯಿತು. ಈ ವೇಳೆ ಮಾತನಾಡಿದ ದೇಗುಲ ಆಡಳಿತಾಧಿಕಾರಿ ಕೃಷ್ಣ ಗಂಗಾಧರೇಶ್ವರನಿಗೆ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನಡೆದವು.ಗುರುವಾರ ಬೆಳಗ್ಗೆ 6 ಗಂಟೆಯಿಂದ ಶುಕ್ರವಾರ ಮುಂಜಾನೆ ವರೆಗೂ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಅಲಂಕಾರ ನಡೆಯಿತು ಎಂದರು.

ಕೊರೊನಾ ಹಿನ್ನೆಲೆಯಲ್ಲಿಮುಂಜಾಗ್ರತಾ ಕ್ರಮ ವಹಿಸಲಾಗಿತ್ತು.ಹಳೆ ಮದ್ರಾಸ್‌ ರಸ್ತೆಯ ಶಿವದೇವಾಲಯ, ಮಾಚೋ ಹಳ್ಳಿಯ ಜೋಡಿ ವೀರಭದ್ರೇಶ್ವರ ರುದ್ರೇಶ್ವರ ಸ್ವಾಮಿ ದೇವಸ್ಥಾನ, ಮಲ್ಲೇಶ್ವರದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಯಶ ವಂತಪುರದ ಶ್ರೀ ಮಹಾಯಾಗ ಕ್ಷೇತ್ರ ಶ್ರೀಗಾಯತ್ರಿ ದೇವಸ್ಥಾನ, ಬಳೇ ಪೇಟೆಯ ಕಾಶಿ ವಿಶ್ವ ನಾಥ ದೇವಸ್ಥಾನ, ಕೆ.ಆರ್‌.ಪುರದ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಾಲಯ, ಇಟ್ಟು ಮಡು ವಿನ ಕೆ.ಬಿ.ರಸ್ತೆಯ ಲ್ಲಿರುವ ರಾಮೇ ಶ್ವರ ಸ್ವಾಮಿ ದೇವಾಲ ಯ, ಬೇಗೂರು ನಗರೇಶ್ವರ ದೇವಸ್ಥಾನ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ ಸಮೀಪ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನ ಸೇರಿದಂತೆ ಇನ್ನೂ ಹಲವು ಬಡಾ ವಣೆಗಳಲ್ಲಿರುವ ಈಶ್ವರ ದೇವಾಲಯದಲ್ಲಿ ಶಿವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸ ಲಾಯಿತು.

ಯಶವಂತಪುರದ ಗಾಯತ್ರಿ ದೇವಾಲಯದಲ್ಲಿ ಶ್ರೀಸ್ವರ್ಣ ಗೌರಿ ಸಮೇತ ಶ್ರೀ ಅಗಸೆöàಶ್ವರ ಸ್ವಾಮಿಗೆ ಸಹಸ್ರನಾಮ ಬಿಲ್ವಾರ್ಚನೆ ನಡೆಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

Advertisement

ಶಿವನಾಮ ಸ್ಮರಣೆ: ಶಿವರಾತ್ರಿಯ ಹಿನ್ನೆಲೆಯಲ್ಲಿ ಉಪವಾಸ, ಜಾಗರಣೆ ಮಾಡಿ ಶಿವಸ್ಮರಣೆ ಮಾಡಿದರು. ಪುರಾಣ ಪಠಣ, ವೇದಾಂತಉಪನ್ಯಾಸ ನಡೆದವು. ಸಂಗೀತೋತ್ಸವದ ಜತೆಗೆ ಅಹೋರಾತ್ರಿ ಶಿವನಾಮ ಜಪ ಜರುಗಿದವು. ರಾತ್ರಿ ಜಾಗರಣೆಗಾಗಿ ನಾನಾ ಸಂಘ ಸಂಸ್ಥೆಗಳು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿದ್ದವು. ಕನಕಪುರ ರಸ್ತೆಯಲ್ಲಿರುವ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲಿ ಶ್ರೀ ರವಿಶಂಕರ್‌ ಗುರೂಜಿ ನೇತೃತ್ವದಲ್ಲಿ ಭಜನೆ, ಸತ್ಸಂಗ ನಡೆಯಿತು. ಶ್ರೀ ಶೃಂಗೇರಿ ಶಾರದಾ ಪೀಠಂ ಶಂಕರಪುರಂನ ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ಗುರುವಾರ ವಿಶೇಷ ಪೂಜೆ, ವೇದಾಶೀರ್ವಾದಗಳು ನೆಡೆದವು. ಹೆಬ್ಟಾಳದ ಚೋಳನಾಯಕನಹಳ್ಳಿಯ  ಶ್ರೀಆನಂ ದ ಗಿರಿ ಬೆಟ್ಟದಲ್ಲಿ ಶಿವರಾತ್ರಿ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈಶ್ವರನಿಗೆ ವಿಶೇಷ ಪೂಜೆ ಅಲಂಕಾರ ಮಾಡ ಲಾಗಿತ್ತು. ಕೋಟೆ ಶ್ರೀ ಜಲಕಂಠೇಶ್ವರ ದೇವ ಸ್ಥಾನದಲ್ಲಿ ಮಹಾಪ್ರದೋಷ, ನಂದೀಶ್ವರ ಸ್ವಾಮಿಗೆ ಅಭಿಷೇಕ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮಗಳು ನೆರೆದ ಭಕ್ತರನ್ನು ಆಕರ್ಷಿಸಿದವು. ಮಲ್ಲೇಶ್ವರದ ನಂಜನಗೂಡು ಶ್ರೀಕಂಠೇಶ್ವರ ಸೇವಾ ಸಂಘ ಶಿವರಾತ್ರಿ ಅಂಗವಾಗಿ ಹಮ್ಮಿ ಕೊಂಡಿದ್ದ ಭಜನಾ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು. ಕುಮಾರಸ್ವಾಮಿ ಬಡಾವಣೆಯ ಬ್ರಾಹ್ಮಣ ಸೇವಾ ಸಂಘದ ಮಹಿಳಾ ವಿಭಾಗದ ಜಯಲಕ್ಷ್ಮಿ ತಂಡ ಭಜನಾ ಕಾರ್ಯಕ್ರಮ ನಡೆಸಿಕೊಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next