Advertisement

Shivaram Hebbar ನಮ್ಮಲ್ಲಿದ್ದವರೇ, ಅನುಕೂಲ ಅನಿಸಿದಾಗ ಬರ್ತಾರೆ: ಸಚಿವ ವೈದ್ಯ

05:03 PM Aug 30, 2023 | Team Udayavani |

ಕಾರವಾರ: ಶಿವರಾಮ್ ಹೆಬ್ಬಾರ್ ನಮ್ಮಲ್ಲಿದ್ದವರೇ, ಕಾಂಗ್ರೆಸ್ ನಲ್ಲಿದ್ದವರೇ. ಅವರ ಮನೆ ಕಾಂಗ್ರೆಸ್. ಅನುಕೂಲ ಅನಿಸಿದಾಗ ಬರ್ತಾರೆ ಎಂದು ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದರು.

Advertisement

ಕಾರವಾರದಲ್ಲಿ ಬುಧುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಯಾವುದೇ ಆಸೆ ಆಕಾಂಕ್ಷೆಗಳನ್ನು ಇಡದೆ ಕಾಂಗ್ರೆಸ್ ಗೆ ಬನ್ನಿ‌. ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣದಿಂದ ಮುಕ್ತಿ ಪಡೆಯುವುದು ಬೇಕಿದ್ದರೆ ನಮ್ಮಲ್ಲಿ ಬನ್ನಿ, ಸದಾ ಸ್ವಾಗತವಿದೆ ಎಂದು ಗೆಳೆಯ ಹೆಬ್ಬಾರರಿಗೆ ಹೇಳಿರುವೆ ಅವರು ಯಾವಾಗ ಬೇಕಿದ್ದರೂ ಬರಬಹುದು ಬಿಡಿ ಎಂದರು.

ಇವತ್ತು ಪರಿಸ್ಥಿತಿ ಹೇಗಿದೆ ಅಂದರೆ ಉತ್ತರ ಕನ್ನಡ ಜಿಲ್ಲೆ ಕಾಂಗ್ರೆಸ್ ಸಮಯವಾಗಿದೆ. ಸಾಮಾನ್ಯ ಕಾರ್ಯಕರ್ತಗೆ ಟಿಕೆಟ್ ಕೊಟ್ಟರು ಗೆಲ್ಲುವ ಸನ್ನಿವೇಶ ಇದೆ. ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಜನರನ್ನು ತಲುಪಿವೆ. ಜನರ ಕೊಳ್ಳುವ ಶಕ್ತಿ ಹೆಚ್ಚಿದೆ. ಜನ ಯೋಜನೆಗಳ ಫಲ ಪಡೆದು ಕಾಂಗ್ರೆಸ್ ಪಕ್ಷವನ್ನು ಸ್ಮರಿಸುತ್ತಿದ್ದಾರೆಂದರು.

ಉತ್ತರ ಕನ್ನಡಕ್ಕೆ ಪ್ರಲ್ಹಾದ್ ಜೋಶಿ ಬಂದರೂ ತೊಂದರೆ ಇಲ್ಲ. ನಮಗೆ ಜನಪರ ಯೋಜನೆಗಳಿವೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ. ನುಡಿದಂತೆ ನಡೆಯುವುದೇ ನಮ್ಮ ಬಲ ಎಂದರು‌ ‌ ಸಿದ್ದರಾಮಯ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಜನರ ನಾಡಿ ಮಿಡಿತ ಗಮನಿಸಿದ್ದಾರೆ‌ .

ಕೋವಿಡ್ ಕಾಲದಲ್ಲಿ ಬೆಂದ ಜನ ಈಗ ಚೇತರಿಸಿಕೊಂಡಿದ್ದಾರೆ‌.ಕಾಂಗ್ರೆಸ್ ಜನರ ಜೊತೆ ಇದೆ ಎಂದರು‌ ‌.ಜೊತೆಗೆ ಶಾಸಕ ಸತೀಶ್ ಸೈಲ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next