Advertisement

Vijayapura; ಯತ್ನಾಳಗೆ ತಾಕತ್ತಿದ್ದರೆ ಈಗಲೇ ಸ್ಪರ್ಧೆಗೆ ಬರಲಿ: ಸಚಿವ ಶಿವಾನಂದ ಪಾಟೀಲ

06:41 PM Apr 15, 2024 | Team Udayavani |

ವಿಜಯಪುರ: ನನ್ನ ವಿರುದ್ಧ ಶಿವಾನಂದ ಪಾಟೀಲ ಕ್ಷೇತ್ರ ಮರು ವಿಂಗಡಣೆ ಬಳಿಕ ತಾಕತ್ತಿದ್ದರೆ ಸ್ಪರ್ಧಿಸಲಿ ಎಂದು ಯತ್ನಾಳ ಹೇಳಿದ್ದಾರೆ. ಆದರೆ ಕ್ಷೇತ್ರ ಮರುವಿಂಗಡಣೆವರೆಗೆ ಕಾಯುವುದು ಬೇಡ, ತಾಕತ್ತಿದ್ದರೆ ಈಗಲೇ ನನ್ನ ವಿರುದ್ಧ ಸ್ಪರ್ಧೆಗೆ ಸಿದ್ಧವಾಗಲಿ ಎಂದು ಸಚಿವ ಶಿವಾನಂದ ಪಾಟೀಲ ಪ್ರತಿಸವಾಲು ಹಾಕಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ಬಾರಿ ಲೋಕಸಭಾ ಚುನಾವಣೆ ಕ್ಷೇತ್ರ ಮರುವಿಂಡಣೆ ಆಗಲಿದ್ದು, ಆಗ ನನ್ನ ವಿರುದ್ದ ಶಿವಾನಂದ ಪಾಟೀಲ ಗಂಡಸಿದ್ದರೆ ಸ್ಪರ್ಧೆ ಮಾಡಲಿ ಎಂದು ಯತ್ನಾಳ ಹಾಕಿದ ಸವಾಲಿಗೆ ತಿರುಗೇಟು ನೀಡಿದರು.

ಬಸನಗೌಡ ಪಾಟೀಲ ಯತ್ನಾಳ ಯಾವ ರೀತಿ ಬಿಸಿನೆಸ್ ಮಾಡುತ್ತಾರೆ, ಸೌಹಾರ್ದದಲ್ಲಿ ಯಾವ ಬಿಸಿನೆಸ್ ಮಾಡಿದ್ದಾರೆಂದು ಮಾಹಿತಿ ಪಡೆಯಿರಿ ಎಂದ ಸಚಿವ ಶಿವಾನಂದ, ನನ್ನ ವಿರುದ್ಧ ಮಾಡುವ ಅರೋಪಕ್ಕೆ ದಾಖಲೆ ಇದ್ದರೆ ಕೊಡಲಿ ಎಂದರು.

ವಿಜಯಪುರ ನಗರ ಶಾಸಕನಾಗಿ ಯತ್ನಾಳ ಮಾಡಿರುವ ಅಭಿವೃದ್ಧಿ ಏನು ಎಂದು ಪ್ರಶ್ನಿಸಿದ ಶಿವಾನಂದ ಪಾಟೀಲ, ಕೇಂದ್ರದಲ್ಲಿ ಸಚಿವರಾಗಿದ್ದಾಗಲೂ ಯತ್ನಾಳ ಏನೂ ಅಭಿವೃದ್ಧಿ ಮಾಡಲಿಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next