Advertisement

Loksabha Election; ಪೂಜ್ಯ ತಂದೆ, ಮಕ್ಕಳ ಶಿವಮೊಗ್ಗದಲ್ಲಿ ನಮ್ಮದೇನೂ ನಡೆಯಲ್ಲ: ಯತ್ನಾಳ್

01:32 PM Apr 14, 2024 | keerthan |

ವಿಜಯಪುರ: ಶಿವಮೊಗ್ಗ ಕ್ಷೇತ್ರದಲ್ಲಿ ದೊಡ್ಡ ನಾಯಕರಿದ್ದಾರೆ. ತಾಯಿ ಹೃದಯದ ಪೂಜ್ಯ ತಂದೆಯವರು, ಅವರ ಸಣ್ಣ ಮಗ, ಹಿರಿಯ ಮಗ ಇದ್ದಾರೆ. ಅಲ್ಲಿ ನಮ್ಮದು ಏನೂ ನಡೆಯುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

Advertisement

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ನೀವು ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲೂ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಪೂಜ್ಯ ತಂದೆಯವರು, ಅವರ ಸಣ್ಣ-ದೊಡ್ಡ ಮಗ ಸೇರಿ ಮೂರು ಜನ ದೊಡ್ಡ ನಾಯಕರು ಇರುವಾಗ ಶಿವಮೊಗ್ಗದಲ್ಲಿ ನಮ್ಮದೇನೂ ನಡೆಯುವುದಿಲ್ಲ ಎಂದರು.

ಅಲ್ಲಿಯೇ ಉತ್ತರ ಕೊಡುತ್ತೇನೆ

ಗಂಡಸ್ತನವಿದ್ದರೆ ನನ್ನ ವಿರುದ್ಧ ವಿಜಯಪುರ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರನಾಗಿ ಬಸನಗೌಡ ಪಾಟೀಲ ಯತ್ನಾಳ್ ನನ್ನ ವಿರುದ್ಧ ಸ್ಪರ್ಧಿಸಿ ಎಂದು ಸಚಿವ ಶಿವಾನಂದ ಪಾಟೀಲ ನೀಡಿರುವ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಸನಗೌಡ ಪಾಟೀಲ ಯತ್ನಾಳ, ಬಾಲಕೋಟೆಗೆ ಹೋಗಿಯೇ ಉತ್ತರ ನೀಡುತ್ತೇನೆ ಎಂದಿದ್ದಾರೆ.

“ಅಂವಾ ಆಹ್ವಾನ ಕೊಡ್ತಾನೆ, ಆಹ್ವಾನ ಕೊಡೋದು ಅವನ ಉದ್ಯೋಗ, ಪ್ರತಿ ಚುನಾವಣೆಯಲ್ಲಿ ಇಂಥ ಹೇಳಿಕೆಯ ಉದ್ಯೋಗ ಮಾಡಿಕೊಂಡೇ ಅವನು ಜೀವನ ಮಾಡುತ್ತಿದ್ದಾನೆ” ಎಂದು ಹರಿಹಾಯ್ದರು.

Advertisement

ಈಗ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಮಗಳನ್ನು ಕಣಕ್ಕಿಳಿಸಿದ್ದಾನೆ. ಬಾಗಲಕೋಟೆಗೆ ಹೋಗಿಯೇ ಏನು ಹೇಳಬೇಕೋ ಅದನ್ನು ಹೇಳುತ್ತೇನೆ. ಬರುವ ಕ್ಷೇತ್ರ ಮರು ವಿಂಗಡಣೆ ವೇಳೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಮಧ್ಯೆ 3 ಲೋಕಸಭೆ ಕ್ಷೇತ್ರಗಳು ಸೃಷ್ಟಿಯಾಗಲಿದ್ದು, ಆಗ ವಿಜಯಪುರ ಸಾಮಾನ್ಯ ಕ್ಷೇತ್ರವಾಗಲಿದ್ದು, ಗಂಡಸ್ಥನ ಇದ್ದರೆ ಆಗ ಬಂದು ಸ್ಪರ್ಧೆ ಮಾಡಲಿ ಎಂದು ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ಪ್ರತಿ ಸವಾಲು ಹೇಳಿದರು.

ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳ ರಹಸ್ಯ ಬಿಚ್ಚಿಡುತ್ತೇನೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, ಎಲ್ಲರ ರಹಸ್ಯ ಇದ್ದೇ ಇರುತ್ತದೆ. ಅಂಥ ಹಲ್ಕಾ ಕೆಲಸ ಮಾಡುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ಸ್ಟಾರ್ ಪ್ರಚಾರ ಬಸನಗೌಡ ಪಾಟೀಲ ಯತ್ನಾಳ ಹರಿಹಾಯ್ದರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next