Advertisement

ಸಾಂಕ್ರಾಮಿಕ ರೋಗ ಶಂಕೆ: 35 ಕುರಿಗಳ ಸಾವು

02:21 PM Oct 26, 2021 | Team Udayavani |

ಶಿವಮೊಗ್ಗ: ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿಸುಮಾರು 35 ಕುರಿಗಳು ಮೃತಪಟ್ಟಿವೆ.ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.

Advertisement

ಸಂಚಾರಿ ಕುರಿಗಾಹಿ ವಾಸಪ್ಪಮಾನಿ ಎಂಬುವವರಿಗೆ ಸೇರಿದ ಸುಮಾರು 35 ಕುರಿಗಳು ಮೃತಪಟ್ಟಿವೆ ಎಂದು ತಿಳಿದು ಬಂದಿವೆ.

ಎನಿóಯೋ ಟಾಕ್ಸಿನಿಯಾ ಎಂಬ ಕಾಯಿಲೆಗೆ ತುತ್ತಾಗಿ ಈ ಕುರಿಗಳು ಮೃತಪಟ್ಟಿವೆಎಂದು ಪಶು ಸಂಗೋಪನಾ ಇಲಾಖೆಮೂಲಗಳು ತಿಳಿಸಿವೆ. ವಾಸಪ್ಪ ಮಾನಿ ಅವರುಬೆಳಗಾವಿ ಜಿಲ್ಲೆ ಚಿಕ್ಕೋಡಿಯಿಂದ ಕುರಿಗಳನ್ನುಮೇಯಿಸಿಕೊಂಡು ಶಿವಮೊಗ್ಗ ಜಿಲ್ಲೆಗೆಬಂದಿದ್ದರು. ಈ ವೇಳೆ ಸಾಂಕ್ರಾಮಿಕ ಕಾಯಿಲೆಗೆತುತ್ತಾಗಿ ಕುರಿಗಳು ಮೃತಪಟ್ಟಿವೆ.

ಮಾಜಿ ಸಿಎಂ ಟ್ವೀಟ್: ಈ ಘಟನೆ ಉಲ್ಲೇಖೀಸಿಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಟ್ವೀಟ್‌ ಮಾಡಿದ್ದು, ಸಂಚಲನಮೂಡಿಸಿದೆ. ತಮ್ಮ ಸರ್ಕಾರ ಇದ್ದ ಅವ ಧಿಯಲ್ಲಿಇಂತವರ ನೆರವಿಗಾಯೇ “ಅನುಗ್ರಹ’ ಎಂಬಯೋಜನೆಯನ್ನು ಜಾರಿಗೆ ತರಲಾಗಿತ್ತು.‌

ಆದರೆ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿದೆಎಂದು ಆರೋಪಿಸಿದ್ದಾರೆ. ಕುರಿಗಾಹಿಗಳ ಓಟಿನಬೇಟೆಗಾಗಿ ಕಂಬಳಿ ಹೊದ್ದು ಚುನಾವಣಾಪ್ರಚಾರ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಈ ನಾಟಕ ನಿಲ್ಲಿಸಿ.ನಿಮಗೆ ಕುರಿಗಾಹಿಗಳ ಬಗ್ಗೆ ಕಾಳಜಿ ಇದ್ದರೆ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ “ಅನುಗ್ರಹ’ಯೋಜನೆಗೆ ಹಣ ಒದಗಿಸಿ, ಪಶುಗಳನ್ನುಕಳೆದುಕೊಂಡ ರೈತರಿಗೆ ಪರಿಹಾರ ನೀಡಿ ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next