Advertisement

ಬಿಜೆಪಿಯವರದು ನಕಲಿ ಹಿಂದುತ್ವ :ಯಮುನಾ

06:18 PM Apr 03, 2022 | Adarsha |

ಶಿವಮೊಗ್ಗ: ನಾಗರಿಕರ ಹಿತ ಕಾಯುವಲ್ಲಿ ವಿಫಲವಾಗಿರುವ ಬಿಜೆಪಿ ನಕಲಿ ಹಿಂದುತ್ವದ ಘೋಷಣೆಕೂಗುತ್ತಾ ಬಡ ಮುಸ್ಲಿಂ ವ್ಯಾಪಾರಿಗಳನ್ನು ದ್ವೇಷ ಮಾಡಿ ಅವರ ದಿನನಿತ್ಯದ ಕೂಲಿ ಕಿತ್ತುಕೊಂಡುಕಾರ್ಪೊರೇಟ್‌ ಬಂಡವಾಳಶಾಹಿ ಮುಸ್ಲಿಮರೊಂದಿಗೆ ಕೈಜೋಡಿಸುತ್ತಿದೆ ಎಂದು ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಆರೋಪಿಸಿದ್ದಾರೆ.

Advertisement

ಈ ಕುರಿತುಹೇಳಿಕೆ ನೀಡಿರುವ ಅವರು, ಕಳೆದವಾರ ನಡೆದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದೆಂದು ರೋಷಾವೇಷ ತೋರಿದ್ದಬಿಜೆಪಿ ನಾಯಕರು ಶಿವಮೊಗ್ಗದ ಬ್ಯಾರೀಸ್‌ ಸಿಟಿ ಸೆಂಟರ್‌ ಮಾಲ್‌ನಲ್ಲಿ ದಕ್ಷಿಣ ಕನ್ನಡದ ಮುಸ್ಲಿಂ ಉದ್ಯಮಿಯಾಗಿರುವಸಿದ್ದಿಕ್‌ ಬ್ಯಾರಿಯವರಿಂದ ನಿರ್ಮಾಣಗೊಂಡಿರುವ ಬಿಫನ್‌ ಇಂಡೋರ್‌ ಗೇಮ್‌ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದುಇವರ ನಾಟಕೀಯ ಹಿಂದುತ್ವಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next