Advertisement

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

08:02 PM May 17, 2024 | Team Udayavani |

ಶಿವಮೊಗ್ಗ: ಮಳೆ ಬಂತು ಎಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರು ಹಿಡಿಶಾಪ ಹಾಕಿದ ಪ್ರಸಂಗ ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ.

Advertisement

ಶುಕ್ರವಾರ ಸಂಜೆ 5.15ಕ್ಕೆ ಬೆಂಗಳೂರಿನಿಂದ ಹೊರಟ ರೈಲಿನ ಡಿ 10 ಬೋಗಿಯ ಪ್ರಯಾಣಿಕರಿಗೆ ರೈಲಿನ ಒಳಗಡೆಯೇ ಮಳೆಯ ಅನುಭವವಾಯಿತು. ರೈಲಿನ ಕಿಟಕಿ, ಬಾಗಿಲು ಮೂಲಕ ಮಳೆ ನೀರು ಬರುತ್ತಿದ್ದನ್ನು ನೋಡುತ್ತಿದ್ದ ಗ್ರಾಹಕರು ರೈಲಿನ ಛಾವಣಿಯಲ್ಲಿ ನೀರು ಸುರಿಯುತ್ತಿದ್ದನ್ನು ಕಂಡು ಹೌಹಾರಿದರು.

ಎರಡ್ಮೂರು ದಿನಗಳಿಂದ ಮಳೆಯಾಗುತ್ತಿದ್ದು ವಾತಾವರಣ ಹಿತವಾಗಿದೆ. ಆದರೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಪ್ರಯಾಣಿಕರಿಗೆ ಮಳೆ ಯಾಕಾದರೂ ಬರುತ್ತಿದೆಯೋ ಎಂದೆನಿಸಿತು. ಶತಾಬ್ದಿ ರೈಲಿನಲ್ಲಿ ಎಲ್ಲವೂ ಕಾಯ್ದರಿಸಿದ ಸೀಟುಗಳಾಗಿದ್ದ ಕಾರಣ ಬೇರೆ ಬೋಗಿಗೆ ಹೋಗಿ ಕೂರಲು ಸಹ ತೊಂದರೆಯಾಗಿತ್ತು. ರೈಲ್ವೆ ಇಲಾಖೆ ಕೂಡಲೇ ಈ ರೀತಿ ಇರುವುದನ್ನು ಸರಿಪಡಿಸಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next