Advertisement

3ನೇ ದಿನವೂ ಶಿವಕುಮಾರ್‌ ಮಾವನ ಮನೆ ಪರಿಶೀಲನೆ

06:50 AM Aug 05, 2017 | Team Udayavani |

ಮೈಸೂರು: ಡಿ.ಕೆ.ಶಿವಕುಮಾರ್‌ ಅವರ ಮಾವ ತಿಮ್ಮಯ್ಯ ಅವರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಮೂರನೇ ದಿನವಾದ ಶುಕ್ರವಾರವೂ ಪರಿಶೀಲನೆ ನಡೆಸಿದರು.

Advertisement

ಮೈಸೂರಿನ ಇಟ್ಟಿಗೆಗೂಡು ಬಡಾವಣೆಯಲ್ಲಿರುವ ಡಿಕೆಶಿ ಅವರ ಮಾವ ತಿಮ್ಮಯ್ಯ ಅವರ ಮನೆ ಮೇಲೆ ಬುಧವಾರ ಬೆಳಗ್ಗೆ 6.30ರ ಸುಮಾರಿಗೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ರಾತ್ರಿಯಾದರೂ ಹೊರ ಬರದೆ, ಪೊಲೀಸ್‌ ರಕ್ಷಣೆಯಲ್ಲಿ ಪರಿಶೀಲನೆ ಮುಂದುವರಿಸಿದ್ದಾರೆ.

ಊಟ-ತಿಂಡಿಯನ್ನು ಹೊರಗಿನಿಂದ ತರಿಸಿಕೊಂಡು ತಿಮ್ಮಯ್ಯ ಅವರ ಮನೆಯಲ್ಲೇ ಮಾಡುತ್ತಿರುವ ಅಧಿಕಾರಿಗಳು, ರಾತ್ರಿಯನ್ನೂ ಅವರ ಮನೆಯಲ್ಲೇ ಕಳೆಯುತ್ತಿದ್ದಾರೆ. ಶಾಲೆಗೆ ಹೋಗುವ ತಿಮ್ಮಯ್ಯ ಅವರ ಮೊಮ್ಮಕ್ಕಳನ್ನು ಬಿಟ್ಟು ಇಡೀ ಕುಟುಂಬದ ಯಾರೊಬ್ಬರೂ ಹೊರಹೋಗದಂತೆ ಗೃಹಬಂಧನ ವಿಧಿಸಿರುವುದರಿಂದ ಶುಕ್ರವಾರ ತಿಮ್ಮಯ್ಯ ಅವರ ಮನೆಯಲ್ಲಿ
ವರಮಹಾಲಕ್ಷ್ಮೀ ವ್ರತವನ್ನೂ ಆಚರಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next