Advertisement

ಎನ್‌ಡಿಎ ತೆಕ್ಕೆಗೆ ಶಿವಪಾಲ್‌ ಯಾದವ್‌?

08:55 AM Jul 31, 2017 | Team Udayavani |

ಲಕ್ನೋ: ದೇಶಾದ್ಯಂತ “ಆಪರೇಷನ್‌ ಕಮಲ’ದ ಭರಾಟೆ ಹೆಚ್ಚಿರುವ ನಡುವೆಯೇ ಉತ್ತರ ಪ್ರದೇಶದ ಸಮಾಜವಾದಿ ಪಕ್ಷಕ್ಕೆ ಅತೀ ದೊಡ್ಡ ಆಘಾತ ಎದುರಾಗುವ ಲಕ್ಷಣಗಳು ಗೋಚರಿಸಿವೆ. ಗುಜರಾತ್‌, ಉತ್ತರಪ್ರದೇಶ ಹಾಗೂ ಬಿಹಾರದಲ್ಲಿನ ರಾಜಕೀಯ ಸಂಚಲನದ ಬೆನ್ನಲ್ಲೇ ಈಗ ಎಸ್ಪಿ ನಾಯಕ ಶಿವಪಾಲ್‌ ಯಾದವ್‌ ಅವರೂ ಎನ್‌ಡಿಎ ಜತೆ ಸಖ್ಯ ಬೆಳೆಸುವ ಚಿಂತನೆ ನಡೆಸುತ್ತಿದ್ದಾರೆ.

Advertisement

ಈಗಾಗಲೇ ಮಾಜಿ ಸಿಎಂ ಅಖೀಲೇಶ್‌ ಯಾದವ್‌ ಅವರೊಂದಿಗೆ ಮುನಿಸಿಕೊಂಡಿರುವ ಶಿವಪಾಲ್‌ ಯಾದವ್‌ ಅವರು ಬಿಹಾರದಲ್ಲಿ ಸಿಎಂ ನಿತೀಶ್‌ ಕುಮಾರ್‌ ಎನ್‌ಡಿಎ ಜತೆ ಸೇರಿಕೊಂಡು ಸರಕಾರ ರಚಿಸಿದ ಬಳಿಕ ತಾವೂ ಎನ್‌ಡಿಎ ತೆಕ್ಕೆಗೆ ಬೀಳಲು ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಅವರು ತಮ್ಮ ಆಲೋಚನೆಯ ಬಗ್ಗೆ ಎಸ್ಪಿ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌ ಅವರೊಂದಿಗೆ ಚರ್ಚಿಸಿದ್ದಾರೆ. ವಿಶೇಷವೆಂದರೆ ನಿತೀಶ್‌ ಅವರ ಜೆಡಿಯು ಪಕ್ಷದತ್ತ ಶಿವಪಾಲ್‌ ಆಕರ್ಷಿತರಾಗಿದ್ದು, ಜೆಡಿಯು ನಾಯಕರೊಂದಿಗೂ ಆರಂಭಿಕ ಮಾತುಕತೆ ನಡೆಸಿದ್ದಾರೆ. ಇದು ಕಾರ್ಯಗತ ಆಗದಿದ್ದರೆ ಹೊಸ ಪಕ್ಷ ರಚಿಸಿ, ಅನಂತರ ಎನ್‌ಡಿಎ ಜತೆ ಮೈತ್ರಿ ಮಾಡಿಕೊಳ್ಳುವ ಆಲೋಚನೆಯೂ ಶಿವಪಾಲ್‌ರಿಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next