Advertisement

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ

01:25 AM May 20, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟ ಸಭೆಗೆ ಬರುವ ಮಸೂದೆ ಕುರಿತಾದ “ಟಿಪ್ಪಣಿ’ಗಳು “ಜಾಗತಿಕ ಗುಣ ಮಟ್ಟದ’ ವರದಿಗಳೊಂದಿಗೆ ಬರುತ್ತವೆ. ಇದರಿಂದಾಗಿ ಜಗ ತ್ತಿನ ಅತ್ಯುತ್ತಮ ಪದ್ಧತಿಗಳೊಂದಿಗೆ ನಮ್ಮ ಕಾನೂ ನನ್ನು ಸಮೀಕರಿಸಲು ಸಾಧ್ಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Advertisement

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ”ಇತ್ತೀಚಿನ ದಿನಗಳಲ್ಲಿ ನನ್ನ ಸಂಪುಟ ಸಭೆಯಲ್ಲಿ ಹೊಸ ಸಂಪ್ರದಾಯ ಶುರುವಾಗಿದೆ. ಸಂಸತ್ತಿನಲ್ಲಿ ಮಸೂದೆಯನ್ನು ಮುಂಡಿಸುವ ಮೊದಲು ಆ ಮಸೂದೆ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರುತ್ತದೆ. ಆಗ ಮಸೂದೆ ಜತೆಗೆ ಅಧಿಕಾರಿಗಳು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾದ ಟಿಪ್ಪಣಿಯನ್ನು ತರುತ್ತಾರೆ. ನಿರ್ದಿಷ್ಟ ಕ್ಷೇತ್ರದಲ್ಲಿ ಯಾವ ದೇಶ ಉತ್ತಮವಾಗಿ ಕಾರ್ಯನಿರ್ವಹಿ ಸು ತ್ತಿದೆ? ನಿಯಮಗಳು ಏನಿವೆ? ನಾವು ಅವುಗಳನ್ನು ಹೇಗೆ ಸಾಧಿಸುವುದು ಇತ್ಯಾದಿ ಮಾಹಿತಿಯು ಅದರಲ್ಲಿ ರು ತ್ತದೆ. ಹೀಗೆ ಮಾಡುವುದರಿಂದ ನಾವು ಪ್ರತೀ ಟಿಪ್ಪಣಿ ಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಸಾಧ್ಯವಾಗು ತ್ತಿದೆ” ಎಂದು ಮೋದಿ ಅವರು ತಿಳಿಸಿದರು.

ದೇಶದ ಸಾಧನೆಗೆ 4 ಎಸ್‌ ಮಂತ್ರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ “4 ಎಸ್‌’ ಮಂತ್ರಗಳನ್ನು ಸೂಚಿಸಿದ್ದಾರೆ. “ಸ್ಕೋಪ್‌”(ಲಕ್ಷ್ಯ) ದೊಡ್ಡದಾಗಿರಬೇಕು. ಅದೇ ರೀತಿ ಸ್ಕೇಲ್‌ (ವಿಸ್ತಾರ) ಕೂಡ ಬೃಹತ್‌ ಆಗಿರಬೇಕು ಮತ್ತು ಈ ಎಸ್‌ಗಳೊಂದಿಗೆ ಸ್ಪೀಡ್‌(ವೇಗ) ಹೊಂದಿಕೊಳ್ಳಬೇಕು. ಆದ್ದ ರಿಂದ ಸ್ಕೋಪ್‌, ಸ್ಕೇಲ್‌ ಮತ್ತು ಸ್ಪೀಡ್‌ಗಳ ಜತೆಗೆ ಸ್ಕಿಲ್‌(ಕೌಶಲ) ಸೇರಬೇಕು. 4 ಎಸ್‌ಗಳನ್ನು ನಾವು ಒಟ್ಟಿಗೆ ತಂದರೆ ನಾವು ಸಾಕಷ್ಟು ಸಾಧನೆ ಮಾಡಬಹುದು ಎಂದಿದ್ದಾರೆ.

ವಿಪಕ್ಷಗಳ ವಿರುದ್ಧ ಹರಿಹಾಯ್ದ ಮೋದಿ: “ಐಎನ್‌ಡಿಐಎ ಯ ನಾಯಕರು ದೇಶದ ಮಕ್ಕಳ ಕಲ್ಯಾಣ ಕೈಗೊಳ್ಳುವುದರ ಬದಲು ತಮ್ಮ ಮಕ್ಕಳ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆಂದು ಮೋದಿ ಆರೋಪಿಸಿದರು. ವಿಪಕ್ಷದ ಎಲ್ಲ ನಾಯಕರು ಒಂದೆಡೆ ಕುಳಿತುಕೊಂಡರೆ, ಇವರು ಇವರ ಪುತ್ರ ಅಥವಾ ಇವರು ಇವರ ತಂದೆ ಎಂದು ಆರಾಮವಾಗಿ ಗುರುತಿಸಬಹುದು. ಐಎನ್‌ಡಿಐಎ ಉದ್ದೇಶ ಸ್ಪಷ್ಟವಾಗಿದೆ ಎಂದರು

ಸೋದರಳಿಯ, ಸೋದರರಿಗೆ ಏನೂ ಮಾಡಬೇಕಿಲ್ಲ
ಭ್ರಷ್ಟಾಚಾರಿಗಳನ್ನು ಜೈಲಿನ ಹೊರಗೆ ಇಡಲು ಬಿಡು ವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿ ದ್ದಾರೆ. ಮೋದಿ ತಮಗಾಗಿ ಆಸ್ತಿ ಮಾಡಿಕೊಳ್ಳು ವುದಿಲ್ಲ. ಅಥವಾ ನನ್ನ ಸೋದರಳಿಯ ಅಥವಾ ಸಹೋದರರಿಗೆ ಮಾಡಬೇಕಾದ್ದೂ ಏನೂ ಇಲ್ಲ ಎಂದು ಮಮತಾ ಸೋದರಳಿ ಯ ಅಭಿಷೇಕ್‌ ಬ್ಯಾನರ್ಜಿಯರನ್ನು ಪರೋಕ್ಷ ವಾಗಿ ಉಲ್ಲೇಖೀಸಿ ಟೀಕಿಸಿದ್ದಾರೆ. ಜೂ. 4ರ ಬಳಿಕ ಹೊಸ ಸರಕಾರ ರಚನೆಯಾಗಲಿದೆ. ಭ್ರಷ್ಟಾಚಾರಿಗಳ ತಮ್ಮ ಜೀವ ನದ ಉಳಿದ ಅವಧಿಯನ್ನು ಜೈಲಿನಲ್ಲಿ ಕಳೆಯಲಿ ದ್ದಾರೆ. ಅವರ ವಿರುದ್ಧ ಹೆಚ್ಚಿನ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದು ಜನರಿಗೆ ನಾನು ನೀಡುತ್ತಿರುವ ಮತ್ತೂಂದು ಗ್ಯಾರಂಟಿ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next