Advertisement

ರಾಜ್ಯಸಭಾ ಉಪಾಧ್ಯಕ್ಷ ಹುದ್ದೆ: ಎನ್‌ಡಿಎ ಅಭ್ಯರ್ಥಿಗೆ ಶಿವಸೇನೆ ಬೆಂಬಲ

03:18 PM Aug 08, 2018 | Team Udayavani |

ಹೊಸದಿಲ್ಲಿ : ರಾಜ್ಯಸಭಾ ಉಪಾಧ್ಯಕ್ಷರ ಸ್ಥಾನಕ್ಕೆ  ನಡೆಯುವ ಚುನಾವಣೆಯಲ್ಲಿ  ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ಬಿಜೆಪಿಯ ಪರಿತ್ಯಕ್ತ ಮಿತ್ರ ಪಕ್ಷವಾಗಿರುವ  ಶಿವಸೇನೆ ನಿರ್ಧರಿಸಿದೆ.

Advertisement

ಆ.9ರಂದು ನಡೆಯುವ ರಾಜ್ಯಸಭಾ ಉಪಾಧ್ಯಕ್ಷರ ಸ್ಥಾನ ಚುನಾವಣೆಗೆ ಎನ್‌ಡಿಎ ತನ್ನ ಅಭ್ಯರ್ಥಿಯಾಗಿ ಜೆಡಿಯು ಪಕ್ಷದ ಹರಿವಂಶ ನಾರಾಯಣ ಸಿಂಗ್‌ ಅವರನ್ನು ನಿಲ್ಲಿಸಿದೆ.

“ನಾವು ಎನ್‌ಡಿಎ ಅಭ್ಯರ್ಥಿಯನ್ನು  ಬೆಂಬಲಿಸುತ್ತೇವೆ’ ಎಂದು ಶಿವಸೇನೆಯ ಸಂಸದ ಅನಿಲ್‌ ದೇಸಾಯಿ ಹೇಳಿದ್ದಾರೆ. 

ಲೋಕಸಭೆಯಲ್ಲಿ ಈಚೆಗೆ ವಿರೋಧ ಪಕ್ಷಗಳು ಮೋದಿ ಸರಕಾರದ ವಿರುದ್ಧ  ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿಯ ಮೇಲಿನ ಮತದಾನದಿಂದ ಶಿವಸೇನೆ ಹೊರಗುಳಿದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next