Advertisement

ಮುಂಬೈ ಖಾಸಗಿ ಹೋಟೆಲ್ ನಲ್ಲಿ ಶಿವಸೇನಾ, NCP ಮತ್ತು ಕಾಂಗ್ರೆಸ್ ಸೇರಿ 162 ಶಾಸಕರ ಬಲಪ್ರದರ್ಶನ

04:09 PM Dec 02, 2019 | Nagendra Trasi |

ಮುಂಬೈ:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ವಾದ, ಪ್ರತಿವಾದ ಆಲಿಸಿದ ನಂತರ ಸುಪ್ರೀಂಕೋರ್ಟ್ ಮಂಗಳವಾರಕ್ಕೆ ಅಂತಿಮ ತೀರ್ಪು ಕಾಯ್ದಿರಿಸಿದೆ. ಮತ್ತೊಂದೆಡೆ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ ಸಿಪಿ ಸರ್ಕಾರ ರಚಿಸಲು ತಮಗೆ ಬಹುಮತ ಇದೆ ಎಂದು ಬಲಪ್ರದರ್ಶನ ನಡೆಸಲು ಮುಂದಾಗಿದೆ.

Advertisement

ಸೋಮವಾರ ಸಂಜೆ 7ಗಂಟೆಗೆ ಮುಂಬೈನ ಹೋಟೆಲ್ ಹೈಯಾತ್ ನಲ್ಲಿ ನಮ್ಮ ಬೆಂಬಲಿತ ಶಾಸಕರ ಪರೇಡ್ ನಡೆಸುವುದಾಗಿ ಶಿವಸೇನಾದ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.

7ಗಂಟೆಗೆ ಹೋಟೆಲ್ ಹೈಯಾತ್ ಗೆ ಬಂದು ನೋಡಿ ನಾವು 162 ಶಾಸಕರು ಒಟ್ಟಿಗೆ ಇದ್ದೇವೆ ಎಂದು ರಾವತ್ ಟ್ವೀಟ್ ಮೂಲಕ ರಾಜ್ಯಪಾಲ ಕೋಶ್ಯಾರಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಹೋಟೆಲ್ ಹೈಯಾತ್ ನಲ್ಲಿ ನಡೆಯಲಿರುವ ಶಾಸಕರ ಪರೇಡ್ ಸಂದರ್ಭದಲ್ಲಿ ಶಿವಸೇನಾದ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಉಪಸ್ಥಿತರಿರಲಿದ್ದಾರೆ.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ರಚನೆ ವಿರುದ್ಧ ಶಿವಸೇನಾ, ಎನ್ ಸಿಪಿ, ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತೀರ್ಪನ್ನು ನಾಳೆಗೆ ಕಾಯ್ದಿರಿಸುವ ಮೂಲಕ ಫಡ್ನವೀಸ್ ನೇತೃತ್ವದ ಸರ್ಕಾರಕ್ಕೆ 24ಗಂಟೆಗಳ ರಿಲೀಫ್ ಸಿಕ್ಕಂತಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next