Advertisement

ಮುಸ್ಲಿಂ ಮೀಸಲಿಗೆ ಬೆಂಬಲ

06:00 AM Aug 02, 2018 | |

ಮುಂಬಯಿ: ಮರಾಠ ಸಮುದಾಯಕ್ಕೆ ಮೀಸಲು ನೀಡುವುದರ ಬಗ್ಗೆ ಮಹಾರಾಷ್ಟ್ರ ಸರಕಾರಕ್ಕೆ ಸವಾಲು ಎದುರಾಗಿರುವಂತೆಯೇ ಶಿವಸೇನೆ ಮುಸ್ಲಿಮರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ.5ರಷ್ಟು ಮೀಸಲು ನೀಡುವ ಪ್ರಸ್ತಾಪಕ್ಕೆ ಬೆಂಬಲ ನೀಡಿದೆ. ಅದನ್ನು ಆಲ್‌ ಇಂಡಿಯಾ ಮಜಿಲಿಸ್‌-ಇ-ಇತ್ತೆಹದುಲ್ಲಾ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ನಾಯಕ ಅಸಾದುದ್ದೀನ್‌ ಒವೈಸಿ ಸ್ವಾಗತಿಸಿದ್ದಾರೆ. ಶೇ.5ರಷ್ಟು ಮೀಸಲು ನೀಡದೇ ಇರುವ ಮೂಲಕ ದೇವೇಂದ್ರ ಫ‌ಡ್ನವಿಸ್‌ ನೇತೃತ್ವದ ಸರಕಾರ ಬಾಂಬೆ ಹೈಕೋರ್ಟ್‌ ತೀರ್ಪು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮುಸ್ಲಿಮರಿಗೆ ಶೇ.5 ಮೀಸಲು ಪ್ರಸ್ತಾಪಕ್ಕೆ ಬೆಂಬಲ ನೀಡುವ ಮೂಲಕ ಶಿವಸೇನೆ ಬಿಜೆಪಿಗೆ ಮುಜುಗರ ತಂದೊಡ್ಡಿದೆ.

Advertisement

ಈ ನಡುವೆ ಮರಾಠಾ ಮೀಸಲು ಹೋರಾಟ ಬುಧವಾರ ಮತ್ತೂ ತೀವ್ರ ಗೊಂಡಿದೆ. ಮೀಸಲು ಹೋರಾಟಗಾ ರರು ನೀತಿ ಜಾರಿಗಾಗಿ ಜೈಲ್‌ ಭರೋ ಚಳವಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 35 ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಮುಂಬೈ ಜತೆಗೆ ಮಹಾರಾಷ್ಟ್ರದ ಇತರ ಭಾಗಗಳಲ್ಲಿಯೂ ಜೈಲ್‌ ಭರೋ ಚಳವಳಿ ನಡೆಯಿತು.

ಸರಕಾರವೇ ಗ್ಯಾರಂಟಿ: ಪ್ರತಿಭಟನೆ ನಡೆಸುತ್ತಿರುವ ಮರಾಠಿ ಸಮುದಾಯ ವನ್ನು ಸಂತೈಸುವ ದೃಷ್ಟಿಯಿಂದ ಹಿಂದುಳಿದ ವರ್ಗಗಳಿಗೆ ನೀಡುವ ಆರ್ಥಿಕ ಸಹಾಯಕ್ಕೆ ಸರಕಾರವೇ ಖಾತರಿಯಾಗಿ ನಿಲ್ಲಲಿದೆ. ಬ್ಯಾಂಕ್‌ಗಳು ಸಾಲಕ್ಕಾಗಿ ಗ್ಯಾರಂಟಿ ಕೇಳುತ್ತಿವೆ. ಹೀಗಾಗಿ 10 ಸಾವಿರಕ್ಕೂ ಅಧಿಕ ಅರ್ಜಿಗಳು ವಿಲೆವಾರಿಗಾಗಿ ಬಾಕಿ ಇವೆ. ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next