Advertisement

ಕುರ್ಕಾಲು: ದರೋಡೆಗೆ ಹೊಂಚು ಹಾಕುತ್ತಿದ್ದವರ ಬಂಧನ

05:34 PM May 06, 2023 | Team Udayavani |

ಶಿರ್ವ : ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಕುರ್ಕಾಲು ಗ್ರಾಮದ ಕುಂಜಾರುಗಿರಿ ದೇವಸ್ಥಾನದ ದ್ವಾರದ ಬಳಿ ದರೋಡೆಗೆ ಹೊಂಚು ಹಾಕುತ್ತಿದ್ದ 6 ಮಂದಿಯನ್ನು ಶಿರ್ವ ಪೊಲೀಸ್‌ ಠಾಣಾಧಿಕಾರಿ ರಾಘವೇಂದ್ರ ಸಿ.ನೇತೃತ್ವದ ತಂಡ ಮೇ. 5 ರಂದು ರಾತ್ರಿ ವಶಕ್ಕೆ ಪಡೆದಿದ್ದಾರೆ.

Advertisement

ಇಕ್ಬಾಲ್‌ ಆಲಿಯಾಸ್‌ ಇಕ್ಬಾಲ್‌ ಶೇಖ್‌ ಆಲಿಯಾಸ್‌ ಇಕ್ಬಾಲ್‌ ಅಹಮದ್‌(32),ಪರ್ವೇಜ್‌(24),ಅಬ್ದುಲ್‌ ರಾಕಿಬ್‌(20), ಮೊಹಮ್ಮದ್‌ ಸಕ್ಲೇನ್‌(23),ಸಲೇಮ್‌ ಆಲಿಯಾಸ್‌ ಸಲೀಂ (19) ಮತ್ತು ಅನಾಸ್‌(19) ಬಂಧಿತರು.

ಬಂಧಿತರಲ್ಲಿದ್ದ ಡ್ರಾಗನ್‌ ಒಂದು, 2 ಮೆಣಸಿನ ಹುಡಿ ಪ್ಯಾಕೆಟ್‌, 3 ಮರದ ವಿಕೆಟ್‌, 3 ದ್ವಿಚಕ್ರ ವಾಹನ ಮತ್ತು 4 ಮೊಬೈಲ್‌ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು ರೂ.2,31,000/-ಆಗಬಹುದು. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next