Advertisement

ಶಿರೂರು: ಅಕ್ರಮ ಗೋ ಸಾಗಾಟ; ಐವರ ಬಂಧನ

12:15 PM Aug 14, 2018 | Harsha Rao |

ಬೈಂದೂರು: ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಕಂಟೈನರ್‌ನಲ್ಲಿ ಆ. 13ರಂದು ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 19 ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು, ಈ ಸಂಬಂಧ  ಐವರನ್ನು ಬಂಧಿಸಿದ್ದಾರೆ. 

Advertisement

ವಾಹನಗಳಲ್ಲಿದ್ದ ಭಟ್ಕಳದ ಇಕ್ಕೆರಿ ಇಸ್ತಿಯನ್‌ ಅಹಮ್ಮದ್‌, ದಾವಣಗೆರೆಯ ಮೆಹಬೂಬ್‌, ತನ್ವೀರ್‌ ಸಾಬ್‌, ನಾಗರಾಜ, ಜಾವೇದ್‌ ಬಂಧಿತರು.

ಆ. 13ರ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಶಿರೂರು ಚೆಕ್‌ಪೋಸ್ಟ್‌ ಬಳಿ ಅಕ್ರಮವಾಗಿ ಒಂದು ಕಂಟೈನರ್‌ನಲ್ಲಿ 10 ಹಾಗೂ ಇನ್ನೊಂದು ಕಂಟೈನರ್‌ನಲ್ಲಿ 9 ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು. ಅದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ಜಾನುವಾರುಗಳು ಹಾಗೂ ವಾಹನಗಳನ್ನು ವಶಕ್ಕೆ ಪಡೆದುಕೊಂಡರು. 

ಜಾನುವಾರುಗಳನ್ನು ಅಕ್ರಮವಾಗಿ ಭಟ್ಕಳ ಮೂಲಕವಾಗಿ ಗೋವಾದ ಕಸಾಯಿಖಾನೆಗೆ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಈ ಸಂಬಂಧ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಗೋ ಹತ್ಯೆ ನಿಷೆೇಧ ಹಾಗೂ ಗೋ ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿ ಹಿಂಸೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next