Advertisement

KSRTC ಬಸ್ ನಲ್ಲಿ ಕುಳಿತಲ್ಲೇ ನೆಲ ಕಾಣುತ್ತದೆ..: ಈ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ!

02:51 PM May 25, 2024 | Team Udayavani |

ಶಿವಮೊಗ್ಗ: ಈ ಕೆಎಸ್ಆರ್ ಟಿಸಿ ಬಸ್ ನಲ್ಲಿ ಪಯಣಿಸುವ ಮುನ್ನ ಎಚ್ಚರ! ಯಾಕೆಂದರೆ ಈ ಬಸ್ ನಲ್ಲಿ ಕುಳಿತರೆ ಅಲ್ಲೇ ನೆಲ ಕಾಣುತ್ತದೆ! ಸ್ವಲ್ಪ ಎಚ್ಚರ ತಪ್ಪಿದರೆ ಈ ಕೆಎಸ್ಆರ್ ಟಿಸಿ ಬಸ್ ನಲ್ಲಿ ಅಪಾಯ ಗ್ಯಾರಂಟಿ.

Advertisement

ಶಿವಮೊಗ್ಗ – ಹರಿಹರ ಮಾರ್ಗ ಮಧ್ಯೆ ಸಂಚರಿಸುವ ಸರ್ಕಾರಿ ಬಸ್ ನ ಸೀಟ್ ಕೆಳಗೆ ಗುಂಡಿ ಕಾಣಿಸಿಕೊಂಡಿದೆ. ಈ ಹೋಲ್ ನಲ್ಲಿ ಮಕ್ಕಳೇನಾದರೂ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.

KA-17 F 1675 ಸಂಖ್ಯೆಯ ಬಸ್ ನ ತಳ ಭಾಗದಲ್ಲಿ ಹಲಗೆ ಮುರಿದು ರಸ್ತೆ ಕಾಣುತ್ತಿದೆ. ರಸ್ತೆ ಕಾಣುವ ಹಾಗೆ ಮುರಿದು ಹೋಗಿದ್ದರೂ ನಿಗಮದ ಅಧಿಕಾರಿಗಳು ಎಚ್ಚರ ವಹಿಸದೆ ಅಪಾಯಕ್ಕೆ ಆಹ್ವಾನ ನೀಡಿದ್ದಾರೆ.

ಬಸ್ ನ ಕಂಡಕ್ಟರ್, ಡ್ರೈವರ್ ಕೂಡಾ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಬಸ್ ನಲ್ಲಿ ಪ್ರಯಾಣಿಕರು ಮಾತ್ರ ಆತಂಕದಿಂದ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next