Advertisement

Shimoga: ಶಿವಮೊಗ್ಗ ಗಲಭೆ: ರಾಜ್ಯಪಾಲರಿಗೆ ವರದಿ

11:28 PM Oct 07, 2023 | Team Udayavani |

ಬೆಂಗಳೂರು: ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್‌ ಮಿಲಾದ್‌ ವೇಳೆ ನಡೆದಿದ್ದ ಗಲಭೆ ಪ್ರಕರಣದ ಸ್ಥಳ ತನಿಖೆ ನಡೆಸಿರುವ ರಾಜ್ಯ ಬಿಜೆಪಿ, ಅದರ ವರದಿಯನ್ನು ಮಂಗಳವಾರ ಅಥವಾ ಬುಧವಾರ ರಾಜ್ಯಪಾಲರಿಗೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಗಲಭೆಗ್ರಸ್ತ ಸ್ಥಳಕ್ಕೆ ಮಾಜಿ ಡಿಸಿಎಂ ಡಾ| ಸಿ.ಎನ್‌.ಅಶ್ವತ್ಥನಾರಾಯಣ ನೇತೃತ್ವದಲ್ಲಿ ತೆರಳಿದ್ದ ಬಿಜೆಪಿಯ ಸತ್ಯಶೋಧನ ತಂಡವು ಪರಿಶೀಲನೆ ನಡೆಸಿತ್ತು. ಗಲಭೆ ವೇಳೆ ಹಲ್ಲೆಗೊಳಗಾದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿತ್ತಲ್ಲದೆ, ಚಿಕಿತ್ಸೆ ನೀಡಿದ ವೈದ್ಯರು, ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದುಕೊಂಡಿತ್ತು. ಪೊಲೀಸರಿಂದಲೂ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ.

Advertisement

ರಾಜ್ಯಪಾಲರ ಭೇಟಿಗೆ ಸೋಮವಾರ ಅನುಮತಿ ಕೇಳಲಿದೆ. ಮಂಗಳವಾರ ಅಥವಾ ಬುಧವಾರ ರಾಜ್ಯಪಾಲರ ಕಾಲಾವಕಾಶ ನೋಡಿಕೊಂಡು ಭೇಟಿ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next