Advertisement

ತಾಯಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದ ತಂದೆ: ರಾತ್ರಿಯಿಡಿ ಮನೆಯ ಮುಂದೆ ಶವವಿಟ್ಟು ಕಾದ ಮಗ

01:28 PM Oct 17, 2020 | keerthan |

ಶಿವಮೊಗ್ಗ: ತಾಯಿಯ ಅಂತ್ಯಸಂಸ್ಕಾರ ಮಾಡಲು ಮಗನಿಗೆ ತಂದೆಯೇ ಅವಕಾಶ ನೀಡದ ಘಟನೆ ಜಿಲ್ಲೆಯ ಯಡಗುಡ್ಡೆ ಗ್ರಾಮದಲ್ಲಿ ನಡೆದಿದೆ. ತಾಯಿ ಶವವನ್ನು ಮನೆಯ ಎದುರಿಟ್ಟು ಅಂತ್ಯಸಂಸ್ಕಾರ ಜಾಗ ನೀಡುವಂತೆ ಮಗ ಗೋಗರೆಯುತ್ತಾ ರಾತ್ರಿಯಿಡಿ ಕಳೆದಿದ್ದಾರೆ.

Advertisement

ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೆದ್ದಾರಿಪುರ ಗ್ರಾ ಪಂ ವ್ಯಾಪ್ತಿಯ ಯಡಗುಡ್ಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಯಡಗುಡ್ಡೆ ಗ್ರಾಮದ ನಾಗರಾಜ್ ಎಂಬವರ ಮೊದಲ ಪತ್ನಿ ನಾಗರತ್ನ (50) ಶುಕ್ರವಾರ ಕ್ಯಾನ್ಸರ್ ನಿಂದಾಗಿ ಮೃತಪಟ್ಟಿದ್ದರು. ಆದರೆ ಪತ್ನಿಯ ಅಂತ್ಯಸಂಸ್ಕಾರಕ್ಕೆ ಜಾಗ ಕೊಡುವುದಿಲ್ಲ ಎಂದು ನಾಗರಾಜ್ ಮನೆಬಾಗಿಲು ಹಾಕಿಕೊಂಡು ರಾತ್ರಿಯಿಡಿ ಮನೆಯೊಳಗೆ ಕುಳಿತಿದ್ದರು.

ತಾಯಿಯ ಅಂತ್ಯಸಂಸ್ಕಾರ ಮಾಡಲು ಜಾಗ ನೀಡಿ ಎಂದು ಮಗ ಗಣೇಶ್ ರಾತ್ರಿಯಿಂದಲೂ ಮನೆಯ ಮುಂದೆ ಶವವಿಟ್ಟು ಕಾಯುತ್ತಿದ್ದಾರೆ.

ಸ್ಥಳಕ್ಕೆ ರಿಪ್ಪನ್ ಪೇಟೆ ಠಾಣಾ ಪೊಲೀಸರು ಭೇಟಿ ನೀಡಿದರೂ, ಶನಿವಾರ ಮಧ್ಯಾಹ್ನದ ವರೆಗೆ  ಗೊಂದಲ ಬಗೆಹರಿಯದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next