Advertisement

ಲಾಕ್‌ಡೌನ್‌ಗೆ ಉತ್ತಮ ಬೆಂಬಲ

01:13 PM Jul 06, 2020 | Naveen |

ಶಿವಮೊಗ್ಗ: ಕೋವಿಡ್ ವೈರಸ್‌ ದಿನೇ ದಿನೇ ಹೆಚ್ಚಾಗುತ್ತಿರುವ ಶಿವಮೊಗ್ಗದಲ್ಲಿ ಭಾನುವಾರದ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟ ಬೆನ್ನಲ್ಲಿ ಅಷ್ಟಕ್ಕೆ ಮಾತ್ರ ಜನ ಓಡಾಡುತ್ತಿರುವುದು ಕಂಡುಬರುತ್ತಿದೆ.

Advertisement

ಜಿಟಿಜಿಟಿ ಮಳೆಗೂ ಸಹ ಜನ ಹೊರಗೆ ಬರಲು ಹಿಂದು ಮುಂದು ನೋಡುತ್ತಿರುವುದು ಕಂಡುಬರುತ್ತಿದೆ. ಹಾಲು, ದಿನಸಿ ಹಾಗೂ ಇತರೆ ಖರೀದಿಗೆ ಜನ ಅಲ್ಲಲ್ಲಿ ಕಂಡುಬರುತ್ತಿದ್ದಾರೆ. ಶಿವಮೊಗ್ಗದ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಜನರ ಮತ್ತು ವಾಹನಗಳು ಹೆಚ್ಚಾಗಿ ಕಂಡುಬಂದರೂ ಸಹ ತಾಲೂಕುಗಳಿಗೆ ಹೋಗಲು ಅಲ್ಲಿ ಇಲ್ಲಿ ಬಸ್‌ಗಳು ಇವೆಯಾ? ಎಂದು ವಿಚಾರಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರ ಸ್ಥಬ್ಧಗೊಂಡಿದೆ. ಭಾನುವಾರ ಲಾಕ್‌ ಡೌನ್‌ ಎಂದು ತಿಳಿದು ಬಂದರೂ ಸಹ ಅಲ್ಲಿ ಇಲ್ಲಿ ಮಹಿಳೆಯರು ಮಕ್ಕಳು ಕಂಡುಬಂದರು. ಜೊತೆಗೆ ಬಸ್‌ ನಿಲ್ದಾಣದ ಅಶೋಕ ವೃತ್ತದ ಬಳಿ ಬೆಳಗ್ಗೆಯಿಂದ ಯಾವುದೇ ಪೊಲೀಸ್‌ ಆಗಲಿ ಅಥವಾ ಗೃಹ ರಕ್ಷಕದಳದವರನ್ನಾಗಲಿ ನಿಯೋಜಿಸದೆ ಇರುವುದು, ಬ್ಯಾರಿಕೇಡ್‌ಗಳನ್ನು ರಸ್ತೆಯಲ್ಲಿ ಹಾಕದಿರುವುದು ಕಂಡುಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next