Advertisement

ಮುರಳಿ ವಿಜಯ್‌ ಗಾಯಾಳು ಲಂಕಾ ಸರಣಿಗೆ ಶಿಖರ್‌ ಧವನ್‌

09:03 AM Jul 18, 2017 | Team Udayavani |

ಹೊಸದಿಲ್ಲಿ: ಸದ್ಯದಲ್ಲೇ ಶ್ರೀಲಂಕಾದಲ್ಲಿ ಟೆಸ್ಟ್‌ ಸರಣಿ ಆಡಲಿರುವ ಭಾರತ ತಂಡದಲ್ಲಿ ಒಂದು ಬದಲಾವಣೆ ಸಂಭವಿಸಿದೆ. ಆರಂಭಕಾರ ಮುರಳಿ ವಿಜಯ್‌ ಗಾಯದಿಂದ ಪೂರ್ತಿ ಚೇತರಿಸದ ಕಾರಣ ಈ ಪ್ರವಾಸದಿಂದ ಹೊರಗುಳಿಯಲಿದ್ದಾರೆ. ಇವರ ಬದಲು ಎಡಗೈ ಓಪನರ್‌ ಶಿಖರ್‌ ಧವನ್‌ ಅವರನ್ನು ಸೇರಿಸಿಕೊಳ್ಳಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಸೋಮವಾರ ಈ ಬದಲಾವಣೆಯನ್ನು ಪ್ರಕಟಿಸಿದರು.

Advertisement

ಕಳೆದ ಆಸ್ಟ್ರೇಲಿಯ ಸರಣಿಯ ವೇಳೆ ಮುರಳಿ ವಿಜಯ್‌ ಬಲಗೈ ಮಣಿಗಂಟಿನ ನೋವಿಗೆ ಸಿಲುಕಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದರೆ ಅಭ್ಯಾಸದ ವೇಳೆ ಅವರ ಮಣಿಗಂಟಿನ ನೋವು ಪೂರ್ತಿ ವಾಸಿಯಾಗದಿರುವುದನ್ನು ಬಿಸಿಸಿಐ ವೈದ್ಯಕೀಯ ತಂಡ ಗಮನಿಸಿದೆ. ವಿಜಯ್‌ ಅವರಿಗೆ ಇನ್ನಷ್ಟು ವಿಶ್ರಾಂತಿ ಅಗತ್ಯವಿರುವುದಾಗಿ ಸೂಚಿಸಿದೆ.

ಶಿಖರ್‌ ಧವನ್‌ 23 ಟೆಸ್ಟ್‌ಗಳನ್ನಾಡಿದ್ದು, 4 ಶತಕಗಳ ಸಹಿತ 1,464 ರನ್‌ ಬಾರಿಸಿದ್ದಾರೆ. ಧವನ್‌ ತಮ್ಮ ಕೊನೆಯ ಟೆಸ್ಟ್‌ ಪಂದ್ಯವನ್ನು ಕಳೆದ ವರ್ಷ ನ್ಯೂಜಿಲ್ಯಾಂಡ್‌ ವಿರುದ್ಧ ಆಡಿದ್ದರು. ತಂಡದಲ್ಲಿರುವ ಉಳಿದಿಬ್ಬರು ಆರಂಭಿಕರೆಂದರೆ ಕೆ.ಎಲ್‌. ರಾಹುಲ್‌ ಮತ್ತು ಅಭಿನವ್‌ ಮುಕುಂದ್‌.  ಭಾರತ-ಶ್ರೀಲಂಕಾ 3 ಟೆಸ್ಟ್‌ ಪಂದ್ಯಗಳನ್ನು ಆಡಲಿದ್ದು, ಮೊದಲ ಟೆಸ್ಟ್‌ ಜು. 26ರಿಂದ ಗಾಲೆಯಲ್ಲಿ ಆರಂಭವಾಗಲಿದೆ. 

ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌, ಶಿಖರ್‌ ಧವನ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ವೃದ್ಧಿಮಾನ್‌ ಸಾಹಾ, ಇಶಾಂತ್‌ ಶರ್ಮ, ಉಮೇಶ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಕುಲದೀಪ್‌ ಯಾದವ್‌, ಅಭಿನವ್‌ ಮುಕುಂದ್‌.

Advertisement

Udayavani is now on Telegram. Click here to join our channel and stay updated with the latest news.

Next