Advertisement

ICC ಚಾಂಪಿಯನ್ಸ್‌ ಟ್ರೋಫಿ ಆಡದಿದ್ದರೆ ಭಾರತ ತಂಡದ ಮೇಲೆ ಪರಿಣಾಮ: ಪಾಕ್‌ನ ರಶೀದ್‌ ಲತೀಫ್

04:01 PM May 05, 2024 | Team Udayavani |

ಕರಾಚಿ: ಐಸಿಸಿ ಟೂರ್ನಿಯನ್ನು ನಿರಾಕರಿಸಿದರೆ ಅದು ಭಾರತೀಯ ಕ್ರಿಕೆಟ್‌ ತಂಡದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟರ್‌ ರಶೀದ್‌ ಲತೀಫ್ ಹೇಳಿದ್ದಾರೆ.

Advertisement

ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್‌ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಮೂಲ ನೀಡಿರುವ ಹೇಳಿಕೆಗೆ, ಲತೀಫ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಶೀದ್‌ ಲತೀಫ್, ನೀವು ಬೇಕಾದರೆ ದ್ವಿಪಕ್ಷೀಯ ಸರಣಿಗಳನ್ನು ನಿರಾಕರಿಸಬಹುದು. ಆದರೆ, ಐಸಿಸಿ ಟೂರ್ನಿಗಳನ್ನು ನಿರಾಕರಿಸುವುದು ಕಠಿಣ ನಿರ್ಧಾರವಾಗುತ್ತದೆ ಎಂದಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸುವುದಕ್ಕೆ ನಿರಾಕರಿಸುವುದು, ತಂಡದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next