Advertisement

ಕ್ವಾರಂಟೈನ್‌ ಮುಗಿಸಿದ ಶಿಖರ್‌ ಧವನ್‌ ಪಡೆ

12:06 AM Jun 26, 2021 | Team Udayavani |

ಮುಂಬಯಿ: ಶ್ರೀಲಂಕಾ ಪ್ರವಾಸಕ್ಕೆ ತೆರಳಲಿರುವ ಶಿಖರ್‌ ಧವನ್‌ ನೇತೃತ್ವದ ಭಾರತೀಯ ಕ್ರಿಕೆಟಿಗರ 14 ದಿನಗಳ ಹೊಟೇಲ್‌ ಕ್ವಾರಂಟೈನ್‌ ಮುಗಿದಿದೆ. ಆಟಗಾರರಿಗೆಲ್ಲ ದೊಡ್ಡ ರಿಲೀಫ್ ಸಿಕ್ಕಿದೆ. ಎಲ್ಲರೂ ಜಿಮ್‌ಗೆ ತೆರಳಿ ಕಠಿನ ವ್ಯಾಯಾಮ ನಡೆಸಿದರು.
ದೇವದತ್ತ ಪಡಿಕ್ಕಲ್‌, ಋತುರಾಜ್‌ ಗಾಯಕ್ವಾಡ್‌, ಕೃಷ್ಣಪ್ಪ ಗೌತಮ್‌, ಚೇತನ್‌ ಸಕಾರಿಯಾ, ವರುಣ್‌ ಚಕ್ರವರ್ತಿ, ನಿತೀಶ್‌ ರಾಣಾ ಮೊದಲಾದವರ ಚಿತ್ರ ಹಾಗೂ ಜಿಮ್‌ ಅಭ್ಯಾಸದ ವೀಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದೆ. ಇವರೆಲ್ಲರೂ ಭಾರತ ತಂಡದ ಹೊಸ ಮುಖಗಳು.

Advertisement

“ನಾನು ಕೊಠಡಿಯಿಂದ ಹೊರಬರುವ ಮುನ್ನ ನನ್ನ ಮುಖವನ್ನು ಅನೇಕ ಸಲ ಕನ್ನಡಿಯಲ್ಲಿ ನೋಡಿಕೊಂಡೆ. ಭಾರತದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದು ನನ್ನ ಪಾಲಿಗೊಂದು ವಿಶೇಷ ಅನುಭವ’ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದ ಸ್ಟಾರ್‌ ಪೇಸರ್‌ ಚೇತನ್‌ ಸಕಾರಿಯಾ ಈ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಕನಸು ನನಸಾಗುವ ಕ್ಷಣ
ಋತುರಾಜ್‌ ಗಾಯಕ್ವಾಡ್‌ ಮತ್ತು ನಿತೀಶ್‌ ರಾಣಾ ಕೂಡ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇದು ಕನಸು ನನಸಾಗುವ ಕ್ಷಣ ಎಂಬುದು ಗಾಯಕ್ವಾಡ್‌ ಅನಿಸಿಕೆ. “ಮೊದಲ ಏಳು ದಿನ ಬಹಳ ಕಷ್ಟವಾಯಿತು. ಹೇಗೋ ಹೊಂದಿಕೊಂಡೆ. ತಂಡದ ಸದಸ್ಯರನ್ನು ನೋಡಲು, ಭಾರತದ ಜೆರ್ಸಿಯನ್ನು ಧರಿಸಲು ಕಾತರಗೊಂಡಿದ್ದೆ…’ ಎಂವರು ನಿತೀಶ್‌ ರಾಣಾ.
ಎಡಗೈ ಆರಂಭಕಾರ ಧವನ್‌ 6 ಪಂದ್ಯಗಳ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭುವನೇಶ್ವರ್‌ ಉಪನಾಯಕರಾಗಿದ್ದು, ದ್ರಾವಿಡ್‌ ಕೋಚ್‌ ಆಗಿದ್ದಾರೆ.

ಏಕದಿನ ಪಂದ್ಯಗಳನ್ನು ಜು. 13, 16 ಮತ್ತು 18ರಂದು; ಟಿ20 ಪಂದ್ಯಗಳನ್ನು ಜು. 21, 23 ಮತ್ತು 25ರಂದು ಆಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next