Advertisement

ಶೀಂಬ್ರ: ಕೊಚ್ಚಿಹೋದ ಸೇತುವೆ ಸಲಕರಣೆ

04:27 PM Jun 12, 2017 | Team Udayavani |

ಬ್ರಹ್ಮಾವರ: ಕೊಳಲಗಿರಿ ಪರಾರಿ ಮೂಲಕ ಶೀಂಬ್ರ, ಮಣಿಪಾಲಕ್ಕೆ ಸಂಪರ್ಕ ಕಲ್ಪಿಸಲು ಸ್ವರ್ಣಾನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯ ಸಲಕರಣೆಗಳು ಶನಿವಾರ ರಾತ್ರಿ ಭಾರೀ ಮಳೆಗೆ ಕೊಚ್ಚಿ ಹೋಗಿ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.

Advertisement

ಸೇತುವೆ ಕಾಮಗಾರಿಯನ್ನು ಮಳೆಗಾಲದ ಪ್ರಯುಕ್ತ ಇನ್ನೆರಡು ದಿನಗಳಲ್ಲಿ ಸ್ಥಗಿತಗೊಳಿ ಸುವ ಬಗ್ಗೆ ನಿರ್ಧರಿಸಿದ್ದು, ಶನಿವಾರ ರಾತ್ರಿ ಒಂದೇ ಸಮನೆ ನೀರಿನ ಹರಿವು ಹೆಚ್ಚಳವಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸೇತುವೆ ಕಾಮಗಾರಿಗೆ ಹೊಳೆಯ ತೀರ ದಲ್ಲಿ ಶೇಖರಿಸಿಟ್ಟಿದ್ದ ಕಬ್ಬಿಣದ ಸಲಕರಣೆ ಮತ್ತು ಇನ್ನಿತರ ಸರಕುಗಳು ಕೊಚ್ಚಿ ಹೋಗಿವೆ. ಸೇತುವೆ ನಿರ್ಮಾಣಕ್ಕೆ ಹಾಕಿದ ಮಣ್ಣು ಕೂಡ ಕೊಚ್ಚಿ ಹೋಗಿದೆ. ಒಂದೇ ಬಾರಿ ಭಾರೀ ಪ್ರಮಾಣದ ನೀರು ಬಂದಿದ್ದರಿಂದ ಸಾಮಾನು ಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾಗಿಲ್ಲ.

ಕಳೆದ ಡಿಸೆಂಬರ್‌ನಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next