Advertisement

ಬಂಟ್ವಾಳ ಯುವವಾಹಿನಿ: ಬಡ ಮಹಿಳೆಗೆ ವಸತಿ ಭಾಗ್ಯ

05:25 AM Jul 28, 2017 | Team Udayavani |

ಬಂಟ್ವಾಳ: ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ಅಮಾrಡಿ ಗ್ರಾಮ ಅಜೆಕಲ ನಿವಾಸಿ, ಬಡ ಮಹಿಳೆ ಅಕ್ಕಮ್ಮ ಅವರಿಗಾಗಿ ನಿರ್ಮಿಸಲಾದ 650 ಚದರ ಅಡಿಗಳ, 4.5 ಲ.ರೂ. ವೆಚ್ಚದ ಮನೆಯನ್ನು ಹಸ್ತಾಂತರಿಸಲಾಯಿತು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್‌ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರ ಅನಾವರಣ ಮೂಲಕ ಮನೆ ಹಸ್ತಾಂತರ ಕಾರ್ಯಕ್ರಮ ನಡೆಸಿದರು.

Advertisement

ಉದ್ಯಮಿ ಜಗದೀಪ್‌ ಡಿ. ಸುವರ್ಣ 
ಮನೆಯ ನಾಮಫಲಕ ‘ಬ್ರಹ್ಮಶ್ರೀ ನಿಲಯ’ ನಾಮಫಲಕ ಅನಾವರಣಗೊಳಿಸಿದರು. ಪುರೋಹಿತ ಕೇಶವ ಶಾಂತಿ ನಾಟಿ, ದ.ಕ. ಜಿಲ್ಲಾ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಬಿರ್ವ, ಯುವವಾಹಿನಿ ಕೇಂದ್ರ ಸಮಿತಿ ನಿಯೋಜಿತ ಅಧ್ಯಕ್ಷ ಯುಶವಂತ ಪೂಜಾರಿ, ಬಂಟ್ವಾಳ ಜೆಸಿಐ ಮಾಜಿ ಅಧ್ಯಕ್ಷ ಲೋಕೇಶ ಸುವರ್ಣ ಬಂಟ್ವಾಳ, ಬಿರುವೆರ್‌ ಕುಡ್ಲ ಇದರ ಸಂಸ್ಥಾಪಕ ಅಭಿಷೇಕ್‌ ಅಮೀನ್‌ ಹಾಗೂ ಬಿರುವೆರೆ ಕುಡ್ಲದ ಅಧ್ಯಕ್ಷ ರಾಕೇಶ್‌ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್‌, ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಅರುಣ್‌ ಕುಮಾರ್‌, ನಿಯೋಜಿತ ಅಧ್ಯಕ್ಷ ಲೋಕೇಶ್‌ ಸುವರ್ಣ ಅಲೆತ್ತೂರು, ಹರೀಶ ಸಾಲ್ಯಾನ್‌ ಅಜೆಕಳ, ಮಾಜಿ ಅಧ್ಯಕ್ಷ ಭುವನೇಶ್‌ ಪಚ್ಚಿನಡ್ಕ, ಸಲಹೆಗಾರ ಬಿ. ತಮ್ಮಯ, ಡಾ| ಸದಾನಂದ ಕುಂದರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next