Advertisement

ಶಾಸ್ತ್ರಕ್ಕೆ ಪ್ರಜ್ಞೆ, ಕಾವ್ಯಕ್ಕೆ ಪ್ರತಿಭೆ ಅಗತ್ಯ

12:51 AM Aug 21, 2019 | Lakshmi GovindaRaj |

ಬೆಂಗಳೂರು: ಶಾಸ್ತ್ರಕ್ಕೆ ಪ್ರಜ್ಞೆ ಮುಖ್ಯವಾದರೆ ಕಾವ್ಯಕ್ಕೆ ಪ್ರತಿಭೆ ಅಗತ್ಯ. ಗದ್ಯ ಮತ್ತು ಕಾವ್ಯ ಪ್ರಕಾರಗಳೆರಡೂ ಕಾವ್ಯವೇ. ವೇದ ಶಬ್ಧ ಪ್ರಧಾನವಾದರೆ ಕಾವ್ಯ ಅರ್ಥ ಪ್ರಧಾನ ಎಂದು ಸಾಹಿತಿ ಚಿಂತಾಮಣಿ ಕೊಡ್ಲೆಕೆರೆ ತಿಳಿಸಿದರು.

Advertisement

ನಗರದ ಬಿಎಂಶ್ರೀ ಕಲಾ ಭವನದಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕನ್ನಡ ಸಂಘಗಳ ಸಮನ್ವಯ ಸಮಿತಿಯ ‘ಸಾಹಿತ್ಯ ದಾಸೋಹ’ ವೇದಿಕೆ ಎರಡು ದಶಕ ಪೂರೈಸಿದ ವೇಳೆ ಸಾಹಿತ್ಯ ದಾಸೋಹ ಮತ್ತು ಸಮನ್ವಯ ಸಮಿತಿ ಕನ್ನಡವೇ ಸತ್ಯ ವೇದಿಕೆಯ ಬರಹಗಾರರ ಸಂಕಲನ “ಸಾಹಿತ್ಯ ಸಿರಿ’ಯನ್ನು ಕೊಡ್ಲೆಕೆರೆ ಬಿಡುಗಡೆ ಮಾಡಿದರು. ವೇದಿಕೆಯು ನಡೆಸುತ್ತಿರುವ ಸಾಹಿತ್ಯ ಸಂಬಂಧಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮನ್ವಯ ಸಮಿತಿಯ ಸಂಚಾಲಕ ಬೆಂ.ಶ್ರೀ. ರವೀಂದ್ರ ಮಾತನಾಡಿ 20 ವರ್ಷಗಳ ಹಿಂದೆ ಕೆಲವು ಸಾಹಿತ್ಯಾಸಕ್ತ ಗೆಳೆಯರು ಪ್ರತಿ ತಿಂಗಳೂ ಒಂದೆಡೆ ಸೇರಿ ಸ್ವರಚಿತ ಬರಹಗಳ ಮಂಡನೆಯೊಂದಿಗೆ ಆರಂಭಿಸಿದ “ಸಾಹಿತ್ಯ ದಾಸೋಹ’ ಇಂದು ದೊಡ್ಡ ಬರಹಗಾರರ ಪಡೆಯನ್ನೇ ಸೃಷ್ಟಿಸಿದೆ ಎಂದರು.

ದಾಸೋಹಿಗಳೂ, ಲೇಖಕರುಗಳೂ ಆದ ಸಮ್ಮೊದ ವಾಡಪ್ಪಿ, ರತ್ನಾ ಮೂರ್ತಿ, ಡಾ. ಗೋವಿಂದ ಹೆಗ್ಡೆ, ಬಿ.ಎಸ್‌. ಚಂದ್ರಶೇಖರ್‌, ಕೆ.ಎನ್‌. ಮಹಾಬಲ ಮತ್ತು “ಸಾಹಿತ್ಯ ಸಿರಿ’ಯ ಸಂಪಾದಕ ಹು.ವಾ. ಶ್ರೀಪ್ರಕಾಶ್‌ ಮಾತನಾಡಿ ಶಿಸ್ತು ನಿಷ್ಠ ದಾಸೋಹ ವೇದಿಕೆಯೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೆ.ಎಸ್‌.ಆರ್‌.ಮೂರ್ತಿ, ರವಿ ಕುಸುಬಿ, ಡಾ. ಶುಭಶ್ರೀ ಪ್ರಸಾದ್‌ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next