Advertisement

ಸ್ವಯಂಪ್ರೇರಿತ ಬಂದ್‌ ಮಾಡುವಂತೆ ಕರಪತ್ರ ಹಂಚಿ ಮನವಿ

02:46 PM Feb 25, 2017 | Team Udayavani |

ನಗರ : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ  ಕರೆ ನೀಡಿರುವ ದ.ಕ. ಜಿಲ್ಲಾ ಹರತಾಳದ ಅಂಗವಾಗಿ ಅಂಗಡಿ ಮುಂಗಟ್ಟುಗಳು, ವಾಹನ ಸಂಚಾರ ನಿಲ್ಲಿಸಿ ಸ್ವಯಂಪ್ರೇರಿತ ಬಂದ್‌ ಮಾಡುವಂತೆ ವಿನಂತಿಸಿ ಸಂಘಟನೆಗಳ ಪ್ರಮುಖರು ಶುಕ್ರವಾರ ಪುತ್ತೂರು ನಗರದಲ್ಲಿ  ಕರಪತ್ರ ಹಂಚಿದರು.

Advertisement

ಬಿಜೆಪಿ, ವಿಶ್ವಹಿಂದೂ ಪರಿಷದ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮೊದಲಾದ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ದರ್ಬೆ ವೃತ್ತದಿಂದ ಬೊಳುವಾರು ತನಕ ಅಂಗಡಿ ಮುಂಗಟ್ಟುಗಳು, ವಾಹನ ಚಾಲಕರಿಗೆ ಮನವಿ ಕರಪತ್ರ ನೀಡಿ ಸ್ವಯಂಪ್ರೇರಿತ ಬಂದ್‌ ನಡೆಸುವಂತೆ ವಿನಂತಿ ಮಾಡಿದರು.

ಸ್ವಯಂಪ್ರೇರಿತ ಬಂದ್‌
ಈ ಸಂದರ್ಭ ಬಜರಂಗದಳ ಮಂಗಳೂರು ವಿಭಾಗ ಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಕೇರಳದಲ್ಲಿ ನಡೆಯುತ್ತಿರುವ ಹಿಂದೂಗಳ ಹಾಗೂ ಮುಗ್ಧರ ಹತ್ಯೆ ತಡೆಯಲು ವಿಫಲರಾದ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಂಗಳೂರಿಗೆ ಬಂದು ಶಾಂತಿ, ಕೋಮು ಸಾಮರಸ್ಯದ ಕುರಿತು ಬೋಧಿಸುವ ಅಗತ್ಯವಿಲ್ಲ. ಪಿಣರಾಯಿ ಭೇಟಿ ವಿರೋಧಿಸಿ ಕರೆ ನೀಡಿರುವ ಜಿಲ್ಲಾ ಬಂದ್‌ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಬಂದ್‌ ಮಾಡಿ ಸಹಕಾರ ನೀಡುವಂತೆ ವಿನಂತಿ ಮಾಡಲಾಗಿದೆ ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ್‌ ಜೈನ್‌, ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪಕ್ಷದ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಸುಜೀಂದ್ರ ಪ್ರಭು, ವಿಶ್ವನಾಥ ಗೌಡ, ವಿನಯ ಭಂಡಾರಿ, ಬಿಎಂಎಸ್‌ನ ಅಧ್ಯಕ್ಷ ಭಾಸ್ಕರ್‌ ನಾೖಕ್‌, ಹಿಂದೂ ಸಂಘಟನೆಗಳ ಮುಖಂಡರಾದ ಅರುಣ್‌ ಕುಮಾರ್‌ ಪುತ್ತಿಲ, ಬೆಟ್ಟ ಜನಾರ್ದನ್‌, ರಾಜೇಶ್‌ ಪೆರಿಗೇರಿ, ಸಚಿನ್‌ ರೈ ಪಾಪೆಮಜಲು ಸೇರಿದಂತೆ ಹಲವರು ಪಾಲ್ಗೊಂಡರು.

ಬಂದೋಬಸ್ತ್
ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ನಡೆಸಲಾಗು ವುದು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಹೆಚ್ಚುವರಿ ಸಿಬಂದಿಯನ್ನು ಕರೆಸಲಾಗುವುದು ಎಂದು ಪೊಲೀಸ್‌ ಇಲಾಖೆ ಮಾಹಿತಿ ತಿಳಿಸಿದೆ. ಫೆ. 25ರಂದು ಪ್ರಥಮ ಪಿಯುಸಿ ಪರೀ ಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಬಸ್‌ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದಾರೆ. ಕೆಎಸ್‌ಆರ್‌ಟಿಸಿ ಓಡಾಟ ಎಂದಿನಂತೆ ಇರಲಿದೆ. 

Advertisement

ಪರಿಸ್ಥಿತಿಯನ್ನು ಅವ ಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗು ತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ತಿಳಿಸಿ ದ್ದಾರೆ. ಖಾಸಗಿ ಬಸ್‌ ಮಾಲಕರು ಫೆ. 25ರ ಬಸ್‌ ಓಡಾಟದ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವು ರಿಕ್ಷಾ ಸಂಘಟನೆಗಳು ಬೆಂಬಲ ಘೋಷಿಸಿದರೆ, ಇನ್ನು ಕೆಲವು ಸಂಘಟನೆಗಳು ತಟಸ್ಥ ನಿಲುವು ವ್ಯಕ್ತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next