Advertisement

ಹುಲಿರಾಯ ನಂತರ ಶಾರ್ದೂಲ; ಅರವಿಂದ್‌ ಕೌಶಿಕ್‌ ಹೊಸ ಚಿತ್ರ 

03:12 PM Aug 23, 2018 | Sharanya Alva |

ಕಳೆದ ವರ್ಷ “ಹುಲಿರಾಯ’ ಚಿತ್ರವನ್ನು ಮಾಡಿದ್ದ ಅರವಿಂದ್‌ ಕೌಶಿಕ್‌, ಈಗ ಸದ್ದಿಲ್ಲದೆ ಒಂದು ಚಿತ್ರದೊಂದಿಗೆ ವಾಪಸ್ಸಾಗಿದ್ದಾರೆ. ಅದೇ “ಶಾರ್ದೂಲ’. ಇದೊಂದು ಹಾರರ್‌ ಚಿತ್ರವಾಗಿದ್ದು, ಈಗಾಗಲೇ ಚಿತ್ರೀಕರಣ ಮುಗಿದಿದೆ. ಚೇತನ್‌ ಚಂದ್ರ, ಕೃತ್ತಿಕಾ ರವೀಂದ್ರ, ರವಿತೇಜ, ಐಶ್ವರ್ಯ ಪ್ರಸಾದ್‌ ಮುಂತಾದವರು ನಟಿಸಿರುವ ಈ ಚಿತ್ರವನ್ನು ರೋಹಿತ್‌ ಎನ್ನುವವರು ನಿರ್ಮಿಸಿದ್ದಾರೆ.

Advertisement

“ಇದು ಹಾರರ್‌-ಥ್ರಿಲ್ಲರ್‌ ಚಿತ್ರವಾದರೂ ಇಲ್ಲಿ ಬಿಳಿ ಸೀರೆ ತೊಟ್ಟ ಹೆಂಗಸರು, ದೆವ್ವಗಳು ಕಾಣುವುದಿಲ್ಲವಂತೆ. ಮನುಷ್ಯ ತನಗೆ ಗೊತ್ತಿಲ್ಲದ ಜಾಗಕ್ಕೆ ಹೋದ ಸಂದರ್ಭದಲ್ಲಿ, ಅಲ್ಲಿನ ಪರಿಸರ ಮತ್ತು ಜನ ಅಗೋಚರವಾಗಿ ಕಾಣಿಸುತ್ತವೆ. ಅವೆಲ್ಲವೂ ಅತೀಂದ್ರಿಯ ಶಕ್ತಿಗಳು ಅಂತ ಅನಿಸೋಕೆ ಶುರುವಾಗುತ್ತದೆ. ಜೀವನದಲ್ಲಿ ನಡೆಯುವ ಅಂತಹ ಘಟನೆಗಳಿಗೆ ಚಿತ್ರ ಉತ್ತರ ಕೊಡುತ್ತದೆ. ಕಥೆಗೆ ಹೊಂದುವುದರಿಂದ ಆಗುಂಬೆ ಕಡೆ ಚಿತ್ರೀಕರಣ ಮಾಡಲಾಗಿದೆ. ಇದೊಂದು ಪ್ರಯಾಣದ ಕಥೆಯಾಗಿದ್ದು, ಕಾರು ಸಹ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿ ಸಾಕಷ್ಟು ಹುಡುಕಾಡಿ ಒಂದು ಬೆಂಜ್‌ ಕಾರು ತಂದಿದೆ’ ಎನ್ನುತ್ತಾರೆ ಅರವಿಂದ್‌ ಕೌಶಿಕ್‌.

ಈ ಚಿತ್ರಕ್ಕೆ ಚೇತನ್‌ ಚಂದ್ರ ಅವರನ್ನು ಅರವಿಂದ್‌ ಕೌಶಿಕ್‌ ಕರೆದಾಗ, ಚೇತನ್‌ ದೂಸರಾ ಯೋಚನೆಯನ್ನೇ ಮಾಡಲಿಲ್ಲವಂತೆ. ಅರವಿಂದ್‌ ಅವರ ಕಥೆ ಕೇಳದೆಯೇ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಒಟ್ಟಾರೆ ಚಿತ್ರ ರೂಪುಗೊಂಡಿರುವ ಬಗ್ಗೆ ಚೇತನ್‌ಗೆ ಖುಷಿ ಇದೆ. ಇನ್ನು ಕೃತ್ತಿಕಾಗೂ ಈ ಚಿತ್ರದಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿದೆಯಂತೆ.

ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ ಅರವಿಂದ್‌ ಕೌಶಿಕ್‌. ಇನ್ನು ಮನು ಅವರ ಛಾಯಾಗ್ರಹಣ, ಸತೀಶ್‌ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next