Advertisement

ಶರತ್‌ ಮನೆಗೆ ಶಾಸಕ ಸುನಿಲ್‌ ಕುಮಾರ್‌ ಭೇಟಿ

02:00 AM Jul 10, 2017 | Harsha Rao |

ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಶರತ್‌ ಮಡಿವಾಳ ಅವರ ಮನೆಗೆ ಕಾರ್ಕಳ ಶಾಸಕ, ವಿಧಾನಸಭೆಯ ವಿಪಕ್ಷದ  ಮುಖ್ಯ ಸಚೇತಕ ಸುನಿಲ್‌ ಕುಮಾರ್‌ ಭೇಟಿ ನೀಡಿ ಮƒತರ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 1ಲಕ್ಷ ರೂ. ನೆರವು ನೀಡಿದರು.

Advertisement

ಶರತ್‌ರ ಸಾವು ನಮಗೆ ತೀವ್ರ ಆಘಾತ ತಂದಿದ್ದು ಸಮಾಜ ಒಳ್ಳೆಯ ಸಮಾಜಮುಖೀ ಚಿಂತನೆಯ ವ್ಯಕ್ತಿಯನ್ನು ಕಳೆದುಕೊಂಡಿದೆ.  ಶರತ್‌ ಹತ್ಯೆಯನ್ನು ಉನ್ನತ ಮಟ್ಟದ ತನಿಖೆಗೆ ಹಾಗೂ ನೈಜ ಆರೋಪಿಗಳ ಬಂಧನಕ್ಕೆ ಸರಕಾರಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದರು.

ಮೃತನ ತಂದೆ ತನಿಯಪ್ಪ ಮಡಿವಾಳ ತಾನೇನೂ ವಿಚಲಿತನಾಗಿಲ್ಲ, ಒಂದು ಉತ್ತಮ ಕಾರ್ಯಕ್ಕೆ ತನ್ನ ಮಗನ ಬಲಿದಾನ ಆಗಿದೆ. ಅವನು ಮತ್ತೆ ಹುಟ್ಟಿಬಂದು ಸಂಘದ ಕಾರ್ಯಕ್ಕೆ ನೆರವಾಗಬೇಕು ಎಂದು ಹೇಳಿ ಗದ್ಗದಿತರಾದರು.
ಈ ಸಂದರ್ಭದಲ್ಲಿ ಬಿಜೆಪಿ ನೇತಾರರಾದ ರಾಜೇಶ್‌ ನಾ„ಕ್‌ ಉಳಿಪಾಡಿಗುತ್ತು, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮದಾಸ ಬಂಟ್ವಾಳ, ಜಿ.ಪಂ. ಸದಸ್ಯ ರವೀಂದ್ರ ಕಂಬಳಿ, ಕಾರ್ಯದರ್ಶಿಗಳಾದ ರಮಾನಾಥ  ರಾಯಿ, ಸೀತಾರಾಮ ಪೂಜಾರಿ, ಸ್ಥಳೀಯರಾದ ಪ್ರವೀಣ್‌ ಗಟ್ಟಿ, ದಯಾನಂದ ಬಿ.ಎಂ.,ಅಶೋಕ ಗಟ್ಟಿ, ನವೀನ್‌ ಅಂಚನ್‌, ಸತೀಶ್‌ ಪೂಜಾರಿ  ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next