Advertisement

ಶಾರದಾ ಪೀಠ ಪುನರಾರಂಭಿಸಿ: ಮೋದಿಗೆ ಮೆಹಬೂಬಾ ಪತ್ರ

12:54 PM Dec 03, 2018 | Team Udayavani |

ಶ್ರೀನಗರ: ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇರುವ ಶಾರದಾ ಪೀಠ ಕ್ಷೇತ್ರದ ಯಾತ್ರೆ ಪುನರಾರಂಭಿಸಬೇಕೆಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಇತ್ತೀಚೆಗೆ, ಪಾಕಿಸ್ಥಾನ‌ದ ಕರ್ತಾರ್ಪುರದಲ್ಲಿರುವ ಸಿಕ್ಖರ ಪುಣ್ಯಕ್ಷೇತ್ರಕ್ಕೆ ಭಾರತೀಯ ಭಕ್ತರು ಹೋಗಿಬರಲು ಅನುಕೂಲವಾಗುವಂಥ “ಕರ್ತಾ ರ್ಪುರ ಕಾರಿಡಾರ್‌ ಯೋಜನೆ’ಗೆ ಉಭಯ ದೇಶಗಳು ಚಾಲನೆ ನೀಡಿವೆ. ಹಾಗೆಯೇ, 7ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾಗಿರುವ, ಪಿಒಕೆಯಲ್ಲಿರುವ ಶಾರದಾ ಪೀಠಕ್ಕೆ ಹಿಂದೂಗಳು ಹೋಗಿಬರುವಂತೆ ಅನುಕೂಲ ಕಲ್ಪಿಸಬೇಕೆಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ. 

Advertisement

ಇದೇ ವೇಳೆ, ಗಡಿ ನಿಯಂತ್ರಣ ರೇಖೆಯಿಂದ ಉಭಯ ದೇಶಗಳ ನಡುವಿನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಎಲ್ಲಾ ಹೆದ್ದಾರಿಗಳನ್ನು ಪುನಃ ಸಂಚಾರಕ್ಕ ಮುಕ್ತವಾಗಿಸಬೇಕೆಂದು ಜಮ್ಮು ಕಾಶ್ಮೀರದ ಮತ್ತೂಬ್ಬ ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾ ಕೇಂದ್ರವನ್ನು ಆಗ್ರಹಿಸಿದ್ದಾರೆ.  ಕರ್ತಾರ್ಪುರ ವಿಚಾರದಲ್ಲಿ ತೋರಿದ ಉತ್ಸಾÖವನ್ನೇ ಹೆದ್ದಾರಿ ಪುನರಾರಂಭ ವಿಚಾರದಲ್ಲೂ ತೋರಬೇಕೆಂದು ತಾಕೀತು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next