Advertisement

ಪಕ್ಷಕ್ಕೆ ಕೈಕೊಟ್ಟ ಶಾಸಕರಿಗೆ ‘’ಪವರ್’ ವಾರ್ನಿಂಗ್ ನೀಡಿದ ಶರದ್ ಪವಾರ್

09:48 AM Nov 24, 2019 | keerthan |

ಮುಂಬೈ: ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷಕ್ಕೆ ನಿಷ್ಠೆ ತೋರಿದ ಎನ್ ಸಿಪಿ ಶಾಸಕರಿಗೆ ಶರದ್ ಪವಾರ್ ವಾರ್ನಿಂಗ್ ನೀಡಿದ್ಧಾರೆ.

Advertisement

ಮುಂಬೈಯಲ್ಲಿ ನಡೆದ ಎನ್ ಸಿಪಿ- ಶಿವಸೇನಾ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್ ಪವಾರ್, ಬಿಜೆಪಿ ಪಕ್ಷದ ಜೊತೆ ಕೈ ಜೋಡಿಸಿರುವ ನಿರ್ಧಾರ ಪವಾರ್ ಅವರದ್ದು. ಅದಕ್ಕೆ ಎನ್ ಸಿಪಿ ಬೆಂಬಲ ನೀಡುವುದಿಲ್ಲಎಂದಿದ್ದಾರೆ.

ನಂತರ ಮಾತನಾಡಿದ ಅವರು, ಬಿಜೆಪಿಯವರು ಪಕ್ಷವನ್ನು ಒಡೆಯುತ್ತಾರೆ. ನಾವು ಜೋಡಿಸುತ್ತೇವೆ. ಈ ಆಟವನ್ನು ನಾವು ಬಯಲು ಮಾಡುತ್ತೇವೆ. ಅಜಿತ್ ಪವಾರ್ ಜೊತೆ ಹೋದ ಶಾಸಕರು ಅನರ್ಹರಾಗುವ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next