Advertisement

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರ: ಇನ್ನೆರಡು ದಿನಗಳಲ್ಲಿ ಶರದ್‌ ಅಂತಿಮ ನಿರ್ಧಾರ

01:08 AM May 05, 2023 | Team Udayavani |

ಮುಂಬಯಿ: ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶರದ್‌ ಪವಾರ್‌ ನಿರ್ಣಯ ಹಿಂಪಡೆ­ಯುವಂತೆ ಬೆಂಬ­ಲಿಗರ ಆಗ್ರಹದ ನಡುವೆಯೇ, ಪವಾರ್‌ ತಾವು ತೆಗೆದು­ಕೊಂಡಿ­ರುವ ಈ ನಿರ್ಣಯ ಪಕ್ಷದ ಭವಿಷ್ಯಕ್ಕೆ ಅಗತ್ಯ ಎಂದಿದ್ದಾರೆ. ಅಲ್ಲದೇ ಪಕ್ಷಕ್ಕೆ ಹೊಸ ನಾಯಕತ್ವದ ಅಗತ್ಯವಿದ್ದು, ಇನ್ನೆರಡು ದಿನಗಳಲ್ಲೇ ಈ ಬಗ್ಗೆ ಅಂತಿಮ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಅವರು “ನಿಮ್ಮೆಲ್ಲರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ನಿಮ್ಮೆಲ್ಲರ ಅಭಿಪ್ರಾಯ­ಗಳನ್ನು ಪಡೆದೇ ನಾನು ನಿರ್ಣಯ ತೆಗೆದುಕೊಳ್ಳ­ಬೇಕಿತ್ತು. ಆದರೆ ನೀವು ಈ ನಿರ್ಣಯಕ್ಕೆ ಒಪ್ಪುತ್ತಿರಲಿಲ್ಲ ಹಾಗಾಗಿ ಈ ರೀತಿ ಘೋಷಿಸಬೇಕಾಯಿತು’ ಎಂದಿದ್ದಾರೆ.

Advertisement

ವಿಭಜನೆ ಭೀತಿಯಿಂದ ಪವಾರ್‌ ರಾಜೀನಾಮೆ?
“ಶರದ್‌ ರಾಜೀನಾಮೆ ಪೂರ್ವ ನಿಗದಿತ. ಮೇ1ರಂದೇ ಅವರು ರಾಜೀನಾಮೆ ನೀಡಬೇಕಿತ್ತು. ಆದರೆ ಬೇರೊಂದು ಕಾರ್ಯಕ್ರಮದ ನಿಮಿತ್ತ 2ಕ್ಕೆ ರಾಜೀ ನಾಮೆ ನೀಡಿದ್ದಾರೆ. ಅಂದು ಬಿಡುಗಡೆಯಾದ ಅವರ ಜೀವನಚರಿತ್ರೆ, ಅವರ ರಾಜ­ಕೀಯ ಸೆಣಸಾಟಗಳನ್ನು ತೆರೆದಿಡುತ್ತವೆ. ಅದರಲ್ಲಿ ಬರೆಯದೇ ಬಿಟ್ಟ ಸಂಗತಿಯೇ ಈ ರಾಜೀನಾಮೆ. ಈಗಾಗಲೇ ಪವಾರ್‌ ಪಕ್ಷದಲ್ಲಿನ ಅನೇಕರು ಬಿಜೆಪಿಗೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ಈ ರೀತಿ ಪಕ್ಷದ ವಿಭಜನೆ ನೋಡುವ ಬದಲು ಪವಾರ್‌ ಘನತೆ­ಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ’ ಎಂದು ಶಿವಸೇನೆ ಮುಖ­ವಾಣಿ ಸಾಮ್ನಾ ಪತ್ರಿಕೆ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next