ತಿಪಟೂರು: ತಾಲೂಕಿನ ಕಾಂಗ್ರೆಸ್ಮುಖಂಡ ಕೆ.ಟಿ. ಶಾಂತಕುಮಾರ್ರನ್ನುಕಾಂಗ್ರೆಸ್ ರಾಜ್ಯಮಟ್ಟದ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಕೆಪಿಸಿಸಿ ಅಧ್ಯಕ ಡಿÒ .ಕೆ. ಶಿವಕುಮಾರ್ ನೇಮಿಸಿಆದೇಶ ಹೊರಡಿಸಿದ್ದಾರೆ.
ಶಾಂತಕುಮಾರ್ ತಾಲೂಕಿನಲ್ಲಿ ಜನಾನುರಾಗಿ ಯುವ ನಾಯಕರಾಗಿದ್ದು, ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದಾರೆ.
ಇವರ ಕಾರ್ಯವೈಖರಿಯನ್ನುಹತ್ತಿರ ದಿಂದ ನೋಡಿದ ರಾಜ್ಯ ಕೆಪಿಸಿಸಿಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಕ್ಷದರಾಜ್ಯಮಟ್ಟದ ಕಾರ್ಮಿಕ ವಿಭಾಗದಪ್ರಧಾನ ಕಾರ್ಯ ದರ್ಶಿಯಾಗಿ ನೇಮಿಸಿದ್ದಾರೆ. ಆದೇಶ ಪತ್ರವನ್ನು ಕಾರ್ಮಿಕವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ್ಅವರು ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ನೀಡಿದ್ದಾರೆ.ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ನಾನು ಪಕ್ಷದ ಮೇಲೆಇಟ್ಟಿರುವ ನಂಬಿಕೆ, ಪ್ರಾಮಾಣಿಕತೆಯನ್ನುಹತ್ತಿರದಿಂದ ಬಲ್ಲವರಾಗಿರುವ ಡಿಕೆಶಿ ಗುರುತಿಸಿ ಈ ಅಧಿಕಾರವನ್ನು ನೀಡಿದ್ದಾರೆ.
ಅವರ ನಂಬಿಕೆಗೆ ತಕ್ಕಂತೆ ನಾನು ಪಕದ Òಸಂಘಟನೆ ಮಾಡಲು ನಾನು ಶಕ್ತಿ ಮೀರಿ ಶ್ರಮಿಸಲಿದ್ದೇನೆ. ತಾಲೂಕಿನಲ್ಲೂ ಪಕ್ಷಸಂಘಟನೆಗೆ ಹೆಚ್ಚು ಒತ್ತು ನೀಡಿ, ಮುಂದಿನಚುನಾವಣೆಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ಅಧಿಕಾರ ಹಿಡಿಯಲು ಪ್ರಾಮಾಣಿಕವಾಗಿದುಡಿಯುತ್ತೇನೆ ಎಂದರು.