Advertisement

ಶಾಂತಲಿಂಗ ಶ್ರೀಗಳ 9ನೇ ಪಟ್ಟಾಧಿಕಾರ ಮಹೋತ್ಸವ

08:02 AM May 23, 2020 | Suhan S |

ಕುಳಗೇರಿ ಕ್ರಾಸ್‌: ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳ 9ನೇ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಶ್ರೀಮಠದಲ್ಲಿ ಸರಳವಾಗಿ ನಡೆಯಿತು.

Advertisement

ಶ್ರೀಮಠದ ಆವರಣದಲ್ಲಿ ಭಕ್ತರು ಹಮ್ಮಿಕೊಂಡಿದ್ದ ಸರಳ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಗೌರವ ಸಲ್ಲಿಸಿದರು. ಗೌರವ ಸ್ವೀಕರಿಸಿದ ಶ್ರೀಗಳು ಮಾತನಾಡಿ, ಜನರಲ್ಲಿ ಜೀವಭಯ ಹುಟ್ಟಿಸಿರುವ ಕೋವಿಡ್ ತಡೆಯುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಂದಾಯ, ಆರೋಗ್ಯ, ಪೊಲೀಸ್‌, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ ಎಂದು ಸ್ಮರಿಸಿದರು.

ಬಿ.ಬಿ. ಐನಾಪುರ, ಚಂದ್ರು ದಂಡಿನ, ಶಿವಯ್ಯ ಹಿರೇಮಠ, ಮಲ್ಲಪ್ಪ ಮೊರಬದ, ಎಸ್‌.ಬಿ. ದಂಡಿನ, ರಮೇಶ ಐನಾಪುರ, ಲಿಂಗರಾಜ ಮೊರಬದ, ಪರವ್ವ ಐನಾಪುರ, ಭೀಮಪ್ಪ ಮನೇನಕೊಪ್ಪ, ಮಹಾಂತೇಶ ಹಿರೇಮಠ, ಮಲ್ಲಯ್ಯ ಕೊಣ್ಣೂರಮಠ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next