Advertisement

ಭಗಂಡ ಮುನಿಗಳಿಗೆ ಷಣ್ಮುಖನ ಭೂದಾನ

07:40 PM Oct 11, 2019 | Lakshmi GovindaRaju |

ಕೊಡಗು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ. ಪುರಾಣದ ಕಾಲದಲ್ಲಿ ಭಗಂಡ ಮಹರ್ಷಿಗಳು ಇಲ್ಲಿ ವಾಸವಿದ್ದರಂತೆ. ಭಗಂಡ ಮುನಿಗಳು, ಷಣ್ಮುಖನ ಕುರಿತು ತಪಸ್ಸು ಮಾಡಿ, ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾಗಿದ್ದರು. ಇವರ ತಪಸ್ಸಿಗೆ ಸಂಪ್ರೀತಗೊಂಡ ಷಣ್ಮುಖನು ತನ್ನ ದಿವ್ಯ ನೆಲೆಯಾಗಿದ್ದ ಸ್ಕಂದ ಕ್ಷೇತ್ರವನ್ನು, ಮಹರ್ಷಿಗಳಿಗೆ ಭೂದಾನವಾಗಿ ನೀಡಿದ.

Advertisement

ನಂತರ ಭಗಂಡ ಮುನಿಗಳು, ಪ್ರಜೆಗಳ ಕ್ಷೇಮಕ್ಕೆ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಿ, ಆರಾಧಿಸಿದರು. ಅದೇ ಕ್ರಮೇಣ ಭಾಗಮಂಡಲವಾಯಿತು. ಈಗಲೂ ಇಲ್ಲಿ ಭಗಂಡೇಶ್ವರ ದೇಗುಲವನ್ನು ಕಾಣಬಹುದು. ಕನ್ನಿಕೆ ಮತ್ತು ಸುಜ್ಯೋತಿ ಎಂಬ ಗುಪ್ತನದಿಗಳು ಇಲ್ಲಿ ಕಾವೇರಿಯನ್ನು ಸೇರುವುದರಿಂದ, ಇದನ್ನು “ತ್ರಿವೇಣಿ ಸಂಗಮ’ ಅಂತಲೂ ಕರೆಯಲಾಗುತ್ತದೆ. ಭಾಗಮಂಡಲ ಕ್ಷೇತ್ರವು, ಮಡಿಕೇರಿಯಿಂದ 33 ಕಿ.ಮೀ. ದೂರದಲ್ಲಿದೆ.

* ಭಾಗಮಂಡಲ

Advertisement

Udayavani is now on Telegram. Click here to join our channel and stay updated with the latest news.

Next