Advertisement

ಕುಳ್ಳುಂಜೆ: ದಾರಿ ತಕರಾರು: ಹಲ್ಲೆ ದೂರು ದಾಖಲು

07:08 PM Dec 20, 2022 | Team Udayavani |

ಸಿದ್ದಾಪುರ: ಕುಳ್ಳುಂಜೆ ಗ್ರಾಮದ ಬಾಗಿಮನೆ ಎಂಬಲ್ಲಿ ಕಾಲುದಾರಿಯ ವಿಚಾರವಾಗಿ ಜಯರಾಮ ಹಾಲಂಬಿ ಮತ್ತು ನವೀನ ಹಾಲಂಬಿ ಅವರು ಹಲ್ಲೆ ಮಾಡಿದ್ದಾರೆ ಎಂದು ಶೇಖರ ನಾಯ್ಕ (48) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಶೇಖರ ನಾಯ್ಕ ಹಾಗೂ ಜಯರಾಮ ಹಾಲಂಬಿ ಅವರ ನಡುವೆ ಕಾಲು ದಾರಿಯ ವಿಚಾರವಾಗಿ ಜಗಳ ನಡೆಯುತ್ತಿತ್ತು. ಡಿ.19ರಂದು ಜಯರಾಮ ಅವರು ತಕರಾರು ಇರುವ ಜಾಗಕ್ಕೆ ಕಲ್ಲುಕಂಬ ಬೇಲಿ ನಿರ್ಮಿಸಲು ಮುಂದಾದರು. ಇದಕ್ಕೆ ಶೇಖರ ನಾಯ್ಕ ಆಕ್ಷೇಪಿಸಿದ್ದಾಗ ಜಯರಾಮ ಹಲ್ಲೆ ನಡೆಸಿದರು. ತಡೆಯಲು ಬಂದ ಸಹೋದರಿಗೆ ನವೀನ ಹಾಲಂಬಿ ಹಲ್ಲೆ ನಡೆಸಿದರು ಎಂದು ಶೇಖರ ನಾಯ್ಕ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಗೆ ಒಳಗಾದವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next