Advertisement

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

03:00 PM May 27, 2022 | Team Udayavani |

ಕುಂದಾಪುರ : ಶಂಕರನಾರಾಯಣ ಗ್ರಾಮದ ತಲ್ಲೂರ್ ಮಕ್ಕಿ ಎಂಬಲ್ಲಿ ರೈತರೊಬ್ಬರು ಗುರುವಾರ ಸಂಜೆ ವಾರಾಹಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Advertisement

ಕೃಷಿಕ ಬಾಬು ನಾಯ್ಕ್ ಅವರು ವಾರಾಹಿ ಹೊಳೆ ಬಳಿ ಇರುವ ಕೃಷಿ ನೀರಾವರಿ ಬಳಸುತಿದ್ದ ಪಂಪ್ ಸೆಟ್ ಬಂದ್ ಮಾಡಲು ಹೋದಾಗ ಕಾಲು ಜಾರಿ ನದಿ ಪಲಾಗಿದ್ದರು. ಶುಕ್ರವಾರ ಬೆಳಗ್ಗೆ ಅವರ ಮೃತ ದೇಹವನ್ನು ಮೇಲಕ್ಕೆತ್ತಲಾಗಿದೆ. ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಮೃತ ದೇಹವನ್ನು ಹೊರ ತೆಗೆದಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next