Advertisement

“ವಿದ್ಯಾಗಿರಿ’ಯಲ್ಲಿ “ಸಂಗೀತ ಗಾನ ವಿನೋದ’!

12:08 AM Dec 23, 2022 | Team Udayavani |

ಮೂಡುಬಿದಿರೆ : ಒಂದು ವೇದಿಕೆ ಯಲ್ಲಿ ಹಿಂದೂಸ್ತಾನಿ ಗಾಯನ, ಇನ್ನೊಂದರಲ್ಲಿ ನಾಟ್ಯ ವೈವಿಧ್ಯ; ಮತ್ತೂಂದರಲ್ಲಿ ಭಾವ ಗಾನ ಮಂಜರಿ, ಮಗದೊಂದು ಕಡೆ ರಸಸಂಜೆ! ವಿದ್ಯಾಗಿರಿ ಅಕ್ಷರಶಃ ಸಾಂಸ್ಕೃತಿಕ ಲೋಕವನ್ನೇ ಧರೆಗಿಳಿಸಿದಂತಿದೆ; ಎಲ್ಲವೂ ಭಿನ್ನ, ವಿಶೇಷ ಹಾಗೂ ಕುತೂಹಲಕಾರಿ. ಜಾಂಬೂರಿಯ 2ನೇ ದಿನ ಗುರುವಾರ ಬೆಳಗ್ಗೆ 9ರಿಂದ ರಾತ್ರಿಯವರೆಗೆ ಪಂಚ ವೇದಿಕೆಗಳಲ್ಲಿ ಸಾಂಸ್ಕೃತಿಕ ದಿಗªರ್ಶನದ ಹೊಸ ಅನುಭೂತಿ ಪಡಿಮೂಡಿತು.

Advertisement

ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ಶಂಕರ್‌ ಮಹಾದೇವನ್‌ ತಂಡದ ಸಂಗೀತ ರಸಸಂಜೆ ಹಾಗೂ ರಾತ್ರಿ ಆಳ್ವಾಸ್‌ ಸಾಂಸ್ಕೃತಿಕ ವೈಭವವು ಹೊಸ ಲೋಕವನ್ನು ತೆರೆಯಿತು.
ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ವಿನುಶ್‌ ಬಳಗದ ಲಘು ಸಂಗೀತ, ಕರ್ನಾಟಕ ಸಂಗೀತದ ಯುವಕಲಾವಿದರಿಂದ ಮಂಜು ನಾದ, ನೌಷಾದ್‌, ನಿಶಾದ್‌ ಸಹೋದರರಿಂದ ಹಿಂದೂಸ್ತಾನಿ ಗಾಯನ, ಸಂಜೆ ಶೇಷಗಿರಿದಾಸ್‌ ಬಳಗದಿಂದ ದಾಸರ ಪದಗಳು, ಸಫìರಾಜ್‌ಖಾನ್‌ ಅವರಿಂದ ಸಾರಂಗಿ, ವಿದುಷಿ ಪ್ರಮೀಳಾ ಲೋಕೇಶ್‌ರಿಂದ ನೃತ್ಯ ವೈವಿಧ್ಯ ಗಮನಸೆಳೆಯಿತು.

ನುಡಿಸಿರಿ ವೇದಿಕೆಯಲ್ಲಿ ವಿಘ್ನೇಶ್ವರ್‌ ಬಳಗದಿಂದ ಮ್ಯಾಂಡೋಲಿನ್‌, ಮಹಾಂತೇಶ್‌ ಹಡಪದ, ಸುನಿಲ್‌ ಅವರಿಂದ ಹಾಸ್ಯಲಹರಿ, ಕೃಷ್ಣಪವನ್‌ ಕುಮಾರ್‌ ಬಳಗದಿಂದ ಕೊಳಲು, ಡಾ| ಮೊಹಸಿನ್‌ ಖಾನ್‌ ಬಳಗದಿಂದ ಸಿತಾರ್‌ ಕೊಳಲು ಜುಗಲ್‌ಬಂದಿ, ವಿಜಯ್‌ ಕುಮಾರ್‌ ಪಾಟೀಲ್‌ ಬಳಗದಿಂದ ದಾಸವಾಣಿ, ಸಂಜೆ ತಾಳ-ಲಯ ವೈವಿಧ್ಯ, ರಾತ್ರಿ ಸಾಯಿ ಡ್ಯಾನ್ಸ್‌ ಇಂಟರ್‌ನ್ಯಾಶನಲ್‌ ಅವರಿಂದ ನಾಟ್ಯ ವೈವಿಧ್ಯ ಮನ ಸೆಳೆಯಿತು. ಪ್ಯಾಲೇಸ್‌ ಗ್ರೌಂಡ್‌ನ‌ಲ್ಲಿ ಸಂಜೆ ನಾಡಿನ ಪ್ರಸಿದ್ಧ ಹಿನ್ನೆಲೆ ಗಾಯಕರಿಂದ ಭಾವಗಾನ ಮಂಜರಿ ಮೋಡಿ ಮಾಡಿತು.

ಕೃಷಿಸಿರಿ ವೇದಿಕೆಯಲ್ಲಿ ಶರಣಪ್ಪ ವಡಿಗೇರಿ ಬಳಗ ಮತ್ತು ಗೀತಾ ಬಳಗದಿಂದ ಜಾನಪದ ಗೀತೆ, ರಾಕೇಶ್‌ ರೈ ಅಡ್ಕ ಸಂಯೋಜನೆಯಲ್ಲಿ ಪುಂಡು ವೇಷ ವೈಭವ, ಬಸವರಾಜ ಶಿಗ್ಗಾಂವಿ ಬಳಗದಿಂದ ದೊಡ್ಡಾಟದ ಹಾಡು, ಉಮೇಶ್‌ ಮಿಜಾರು, ದೀಪಕ್‌ ರೈ ಹಾಸ್ಯ, ಜಗದೀಶ್‌ ಪುತ್ತೂರು ಬಳಗದ ರಸಸಂಜೆ, ಬಯಲು ರಂಗ ಮಂದಿರದಲ್ಲಿ ಶಂಕರ್‌ ಶಾನುಭೋಗ್‌ ಬಳಗದ
ಕನ್ನಡ ಡಿಂಡಿಮ ಆಕರ್ಷಿಸಿತು.

ಎಲ್ಲವೂ ಆಕರ್ಷಕ ಲೋಕ!
12 ಎಕರೆ ವಿಸ್ತಾರದ ಪಾರಂಪರಿಕ ತರ ಕಾರಿ ತೋಟವಿದೆ. 100 ವಿಧ ತರಕಾರಿಗಳ ಅತ್ಯಾಕರ್ಷಕ ನೈಜ ತೋಟವಿದು. ವಿಶಾಲ ಪುಷ್ಪಾಲಂಕಾರವೂ ಗಮನ ಸೆಳೆಯುತ್ತಿದೆ. ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ ವಿದೆ. ಅಸಂಖ್ಯ ಪುಸ್ತಕ ಪ್ರದರ್ಶನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next