Advertisement

ಮೀರಾರೋಡು ಪಲಿಮಾರು ಮಠದಲ್ಲಿ ಶನೀಶ್ವರ ಜಯಂತಿ

05:33 PM Jun 05, 2019 | Vishnu Das |

ಮುಂಬಯಿ: ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಸರ್ವಮೂಲ ಗ್ರಂಥ, ಹಂಸ ಮಂತ್ರಗಳಿಂದ ಮುದ್ರಿತವಾದ 100 ಕಿಲೋ ಬಂಗಾರದ ಹೊದಿಕೆಯನ್ನು ಉಡುಪಿ ಶ್ರೀ ಕೃಷ್ಣಮಠದ ಗರ್ಭಗುಡಿಯ ಗೋಪುರಕ್ಕೆ ಹೊದಿಸುವ ಮೂಲಕ ಅಷ್ಟಮಠಗಳ ಧ್ಯೇಯೋದ್ಧೇಶಗಳಿಗೆ ಶಾಶ್ವತ ನೆಲೆ ಒದಗಿಸಿದರು. ಶ್ರೀಗಳು ಆರ್ಥಿಕ, ಧಾರ್ಮಿಕ, ಮಾನವೀಯ ದೃಷ್ಟಿಯಿಂದ ಸ್ಥಾಪಿಸಿದ 20 ತಳಿಗಳ ಸುಮಾರು 300 ಸ್ವದೇಶಿ ಗೋವುಗಳ ಸಮ್ಮಿಲನವು ಉಡುಪಿಯಲ್ಲಿ ಗೋಪುರವನ್ನು ನಿರ್ಮಿಸಿದೆ ಎಂದು ಪಲಿಮಾರು ಮಠದ ಮುಖ್ಯ ಪ್ರಬಂಧಕ, ಟ್ರಸ್ಟಿ, ವಿದ್ವಾನ್‌ ರಾಧಾಕೃಷ್ಣಭಟ್‌ ತಿಳಿಸಿದರು.

Advertisement

ಜೂ. 3ರಂದು ಸಂಜೆ ಮೀರಾರೋಡು ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಪ್ರಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಶನೀಶ್ವರ ಜಯಂತಿ ಉತ್ಸವದಲ್ಲಿ ಧಾರ್ಮಿಕ ಸಂದೇಶ ನೀಡಿದ ಅವರು, ಶನಿಯು ತುಂಬಾ ಶಕ್ತಿಯುತವಾದ ನಿಷ್ಠುರ ಮಾತಿನ, ಸಹನೆ, ಶ್ರಮ, ಪ್ರಯತ್ನ ಅನುಭವಗಳ ಪ್ರತೀಕವಾಗಿ¨ªಾರೆ. ಮನುಷ್ಯ ತಾನು ಮಾಡಿದ ಕೆಟ್ಟ ಕರ್ಮದ ಫಲದ ಅನುಸಾರ, ಶನಿಯ ಸ್ಥಾನ ಕೆಟ್ಟದಾಗಿ ಕಷ್ಟಗಳು ಬರುತ್ತವೆ. ಸನ್ಮಾರ್ಗದಿಂದ ನಡೆದರೆ ಉತ್ತಮ ಫಲಪ್ರಾಪ್ತಿ ಯೊಂದಿಗೆ ದೇವರ ಸಾನ್ನಿಧ್ಯ ಹೊಂದಲು ಸಾಧ್ಯ ಎಂದರು.

ಯತಿರಾಜ ಉಪಾಧ್ಯಾಯ ಅವರು ಶ್ರೀ ಶನಿ ದೇವರ ಮಹಿಮೆಯನ್ನು ವಿವರಿಸಿ ಲೌಖೀಕ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಪರೋಪಕಾರ ಜೀವನ, ಸತ್ಯ, ಪ್ರಾಮಾಣಿಕತೆ ದುಡಿಮೆಯಿಂದ ಜೀವನ ಸವೆಸುವುದೇ ಶನಿ ಗ್ರಂಥದ ತಾತ್ಪರ್ಯವಾಗಿದೆ. ಆಹಂ ಅನ್ನು ಬಿಟ್ಟರೆ ಮಾನವ ದೈವತ್ವಕ್ಕೆ ಏರಲು ಸಾಧ್ಯ ಎಂದರು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಪೂರ್ಣ ನವಗ್ರಹ ಶನಿ ಯಾಗ, ಶನೈಶ್ವರ ಯಾಗ, ಸಾಮೂಹಿಕ ಭಜನೆ, ಸಾರ್ವಜನಿಕ ಶ್ರೀ ಶನಿ ಪೂಜೆ ಹಾಗೂ ಸನ್ನಿಧಿಯ ಪರಿವಾರ ದೇವರಿಗೆ ವಿಶೇಷ ಪೂಜೆ ನೆರವೇರಿತು.

ರಾಘವೇಂದ್ರ ನಕ್ಷತ್ರಿ, ಗೋಪಾಲ್‌ ಭಟ್‌, ವಿಷ್ಣು ಪ್ರಸಾದ್‌ ಭಟ್‌, ಕಾರ್ತಿಕ್‌ ಉಪಾಧ್ಯಾಯ, ವಾಸುದೇವ ಭಟ್‌, ದೇವರಾಜ ನೆಲ್ಲಿ, ನಾಗರಾಜ ಪೋತಿ ಅವರು ವೈದಿಕ ತತ್ವದಡಿ ಸಹಕರಿಸಿದರು. ಕರಮ ಚಂದ್ರ ಗೌಡ ಮತ್ತಿತರರು ಭಕ್ತಾದಿಗಳ ವ್ಯವಸ್ಥೆಗಳಿಗೆ ಸಹಕರಿಸಿದರು. ತುಳು ಕನ್ನಡಿಗರು, ಪರಿಸರದ ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.

ಚಿತ್ರ-ವರದಿ: ರಮೇಶ ಅಮೀನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next