Advertisement

“ನೀನು ಚೆನ್ನೈ ತಂಡದ ಹೃದಯ ಬಡಿತ ಇದ್ದಂತೆ..“ ಗೆಳೆಯನಿಗೆ ಭಾವುಕ ಸಂದೇಶ ನೀಡಿದ ವ್ಯಾಟ್ಸನ್

02:26 PM Aug 30, 2020 | keerthan |

ದುಬೈ: ಕೋವಿಡ್-19 ಸೋಂಕಿನ ನಡುವೆ ಯುಎಇನಲ್ಲಿ ಐಪಿಎಲ್ ಆರಂಭಕ್ಕೆ ಸಿದ್ದತೆ ನಡೆಯುತ್ತಿದೆ. 13ನೇ ಆವೃತ್ತಿಯ ಐಪಿಎಲ್ ಗಾಗಿ ಎಲ್ಲಾ ಎಂಟು ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿದೆ. ಈ ಮಧ್ಯೆ ವೈಯಕ್ತಿಕ ಕಾರಣಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ, ಐಪಿಎಲ್ ಬಿಟ್ಟು ಭಾರತಕ್ಕೆ ಮರಳಿದ್ದಾರೆ.

Advertisement

ಕೋವಿಡ್ ಪಾಸಿಟಿವ್ ಆಘಾತದಿಂದ ಇದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸುರೇಶ್ ರೈನಾ ಭಾರತಕ್ಕೆ ವಾಪಾಸ್ ಆಗಮಿಸಿದ್ದು ಮತ್ತಷ್ಟು ಆಘಾತ ನೀಡಿದೆ. ಆದರೆ ರೈನಾ ಗೆ ಚೆನ್ನೈ ತಂಡ ಸಂಪೂರ್ಣ ಬೆಂಬಲ ನೀಡಿದೆ.

ಇದೀಗ ಸಿಎಸ್ ಕೆ ತಂಡದ ಪ್ರಮುಖ ಆಟಗಾರ ಶೇನ್ ವ್ಯಾಟ್ಸನ್ ಸುರೇಶ್ ರೈನಾ ಅವರಿಗಾಗಿ ಸಂದೇಶ ಕಳುಹಿಸಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಮಾಡಿರುವ ಅವರು, ಈ ಬಾರಿಯ ಐಪಿಎಲ್ ನಿಂದ ನೀವು ತಪ್ಪಿಸಿಕೊಳ್ಳಲಿದ್ದೀರಿ. ಆರಂಭದಿಂದಲೂ ನೀವು ಸಿಎಸ್ ಕೆ ಪರವಾಗಿಯೇ ಇದ್ದಿರಿ. ನೀವು ಸಿಎಸ್ ಕ ತಂಡದ ಹೃದಯ ಬಡಿತ ಇದ್ದಂತೆ ಎಂದು ವ್ಯಾಟ್ಸನ್ ಹೇಳಿದ್ದಾರೆ.

ಐಪಿಎಲ್ ಆರಂಭಕ್ಕೆ ಕೆಲವೇ ದಿನ ಬಾಕಿಯುಳಿದಿದ್ದು, ಚೆನ್ನೈ ತಂಡದ 10 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ವೇಗಿ ದೀಪಕ್ ಚಾಹರ್ ಮತ್ತು ಬ್ಯಾಟ್ಸಮನ್ ರಿತುರಾಜ್ ಗಾಯಕ್ವಾಡ್ ಮತ್ತು ಎಂಟು ಮಂದಿ ಸಿಬ್ಬಂದಿಗಳಿಗೆ ಸೋಂಕು ದೃಢವಾಗಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next